ಚಂದ್ರನನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು, ‘ಚಂದ್ರನನ್ನು ‘ಸನಾತನ ಹಿಂದೂ ರಾಷ್ಟ್ರವೆಂದು ಸಂಸತ್ತು ಘೋಷಿಸಬೇಕು. ‘ಶಿವಶಕ್ತಿ ಪಾಯಿಂಟ್’ ಅನ್ನು ಚಂದ್ರನ ರಾಜಧಾನಿಯನ್ನಾಗಿ ಮಾಡಬೇಕು. ಇದರಿಂದ ಜಿಹಾದಿ ಮನಃಸ್ಥಿತಿ ಉಳ್ಳ ಯಾವುದೇ ಉಗ್ರಗಾಮಿ ಅಲ್ಲಿ ತಲುಪಲಾರ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದ್ದಾರೆ.