<p><strong>ಲಖನೌ</strong>: ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಆಗಿರುವ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಲಹೆ ನೀಡಿದ್ದಾರೆ.</p>.<p>ಖಾಸಗಿ ಟಿ.ವಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯೋಗಿ, ಮುಸ್ಲಿಂ ಧರ್ಮಗುರುಗಳು ಮತ್ತು ಮುಖಂಡರು ವಿರೋಧಿಸುತ್ತಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪ್ರಸ್ತಾವ ಉಲ್ಲೇಖಿಸಿದ ಅವರು, ದೇಶವು ಸಂವಿಧಾನದ ಮೂಲಕ ಆಡಳಿತ ನಡೆಸುತ್ತದೆ, ಯಾವುದೇ ಧರ್ಮದಿಂದ ಅಲ್ಲ ಎಂದಿದ್ದಾರೆ.</p>.<p>‘ನಾನು ಜ್ಞಾನವಾಪಿಯನ್ನು ಮಸೀದಿ ಎಂದು ಕರೆದರೆ ವಿವಾದ ಉಂಟಾಗುತ್ತದೆ. ಮಸೀದಿಯೊಳಗೆ ತ್ರಿಶೂಲ ಏನು ಮಾಡುತ್ತಿದೆ?. ನಾವು ಅದನ್ನು ಅಲ್ಲಿ ಇಟ್ಟಿಲ್ಲ, ಅಲ್ಲಿ ಜ್ಯೋತಿರ್ಲಿಂಗವಿದೆ, ಅನೇಕ ವಿಗ್ರಹಗಳಿವೆ’ ಎಂದು ಸಿ.ಎಂ ಹೇಳಿದರು.</p>.<p>ಜ್ಞಾನವಾಪಿ ಮಸೀದಿ ಮೇಲಿನ ತಮ್ಮ ಹಕ್ಕನ್ನು ಮುಸ್ಲಿಮರು ಕೈಬಿಡಬೇಕು ಎಂದು ಸಲಹೆ ನೀಡಿದ ಯೋಗಿ , ಐತಿಹಾಸಿಕ ತಪ್ಪು ನಡೆದಿದೆ ಮತ್ತು ಅದನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯ ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.</p>.<p>ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇವರ ಶಿಷ್ಯ. ಬೂಟಾಟಿಕೆ ನಂಬುವುದಿಲ್ಲ. ನಿಮ್ಮ ಧರ್ಮ ನಿಮ್ಮ ಮನೆಯೊಳಗೆ ಇದೆ. ಬೀದಿಗಳಲ್ಲಿ ಪ್ರದರ್ಶನ ನೀಡಲು ಅಲ್ಲ. ಇತರರ ಮೇಲೆ ಹೇರಲು ಅಲ್ಲ ಎಂದರು.</p>.<p>ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಆ.3ರಂದು ನೀಡಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಆಗಿರುವ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಲಹೆ ನೀಡಿದ್ದಾರೆ.</p>.<p>ಖಾಸಗಿ ಟಿ.ವಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯೋಗಿ, ಮುಸ್ಲಿಂ ಧರ್ಮಗುರುಗಳು ಮತ್ತು ಮುಖಂಡರು ವಿರೋಧಿಸುತ್ತಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪ್ರಸ್ತಾವ ಉಲ್ಲೇಖಿಸಿದ ಅವರು, ದೇಶವು ಸಂವಿಧಾನದ ಮೂಲಕ ಆಡಳಿತ ನಡೆಸುತ್ತದೆ, ಯಾವುದೇ ಧರ್ಮದಿಂದ ಅಲ್ಲ ಎಂದಿದ್ದಾರೆ.</p>.<p>‘ನಾನು ಜ್ಞಾನವಾಪಿಯನ್ನು ಮಸೀದಿ ಎಂದು ಕರೆದರೆ ವಿವಾದ ಉಂಟಾಗುತ್ತದೆ. ಮಸೀದಿಯೊಳಗೆ ತ್ರಿಶೂಲ ಏನು ಮಾಡುತ್ತಿದೆ?. ನಾವು ಅದನ್ನು ಅಲ್ಲಿ ಇಟ್ಟಿಲ್ಲ, ಅಲ್ಲಿ ಜ್ಯೋತಿರ್ಲಿಂಗವಿದೆ, ಅನೇಕ ವಿಗ್ರಹಗಳಿವೆ’ ಎಂದು ಸಿ.ಎಂ ಹೇಳಿದರು.</p>.<p>ಜ್ಞಾನವಾಪಿ ಮಸೀದಿ ಮೇಲಿನ ತಮ್ಮ ಹಕ್ಕನ್ನು ಮುಸ್ಲಿಮರು ಕೈಬಿಡಬೇಕು ಎಂದು ಸಲಹೆ ನೀಡಿದ ಯೋಗಿ , ಐತಿಹಾಸಿಕ ತಪ್ಪು ನಡೆದಿದೆ ಮತ್ತು ಅದನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯ ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.</p>.<p>ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇವರ ಶಿಷ್ಯ. ಬೂಟಾಟಿಕೆ ನಂಬುವುದಿಲ್ಲ. ನಿಮ್ಮ ಧರ್ಮ ನಿಮ್ಮ ಮನೆಯೊಳಗೆ ಇದೆ. ಬೀದಿಗಳಲ್ಲಿ ಪ್ರದರ್ಶನ ನೀಡಲು ಅಲ್ಲ. ಇತರರ ಮೇಲೆ ಹೇರಲು ಅಲ್ಲ ಎಂದರು.</p>.<p>ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಆ.3ರಂದು ನೀಡಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>