<p><strong>ಹೈದರಾಬಾದ್</strong>: ‘ಬಾಬರಿ ಮಸೀದಿ ನೆಲಸಮ ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ‘ಅತಿರಂಜಿತ ಕ್ರಿಮಿನಲ್ ಕೃತ್ಯ’ಗಳನ್ನು ಓದುತ್ತಾ ಬೆಳೆಯಬಾರದು’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಎನ್ಸಿಇಆರ್ಟಿಯ 12ನೇ ತರಗತಿ ಪರಿಷ್ಕೃತ ಪಠ್ಯಕ್ರಮ ಕುರಿತು ಎಕ್ಸ್ ಜಾಲತಾಣದಲ್ಲಿ ಅವರು, ‘ಬಾಬರಿ ಮಸೀದಿ ನೆಲಸಮವನ್ನು ಸುಪ್ರೀಂ ಕೋರ್ಟ್, ‘ಘೋರವಾದ ಕ್ರಿಮಿನಲ್ ಕೃತ್ಯ’ ಎಂದು ಹೇಳಿತ್ತು ಎಂಬುದೂ ವಿದ್ಯಾರ್ಥಿಗಳಿಗೆ ತಿಳಿಯಬೇಕು’ ಎಂದಿದ್ದಾರೆ. </p>.<p>ಎನ್ಸಿಇಆರ್ಟಿ ತನ್ನ ಪರಿಷ್ಕೃತ ಪಠ್ಯಕ್ರಮದಲ್ಲಿ ಬಾಬರಿ ಮಸೀದಿಯನ್ನು ಮೂರು ಗೋಪುರಗಳಿದ್ದ ಸಂಕೀರ್ಣ ಎಂದು, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ‘ಒಮ್ಮತ’ಕ್ಕೆ ಉದಾಹರಣೆ ಎಂದು ಉಲ್ಲೇಖಿಸಿದೆ ಎಂದು ಅವರು ಹೇಳಿದ್ದಾರೆ.</p>.<p>ಮಸೀದಿಯನ್ನು ಗುಂಪೊಂದು 1992ರಲ್ಲಿ ನೆಲಸಮಗೊಳಿಸಿತು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಬೇಕು. ಅವರು ಅತಿರಂಜಿತ ಕ್ರಿಮಿನಲ್ ಕೃತ್ಯಗಳನ್ನು ಓದಿ ಬೆಳೆಯಬಾರದು ಎಂದು ಒವೈಸಿ ಪ್ರತಿಪಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ‘ಬಾಬರಿ ಮಸೀದಿ ನೆಲಸಮ ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ‘ಅತಿರಂಜಿತ ಕ್ರಿಮಿನಲ್ ಕೃತ್ಯ’ಗಳನ್ನು ಓದುತ್ತಾ ಬೆಳೆಯಬಾರದು’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಎನ್ಸಿಇಆರ್ಟಿಯ 12ನೇ ತರಗತಿ ಪರಿಷ್ಕೃತ ಪಠ್ಯಕ್ರಮ ಕುರಿತು ಎಕ್ಸ್ ಜಾಲತಾಣದಲ್ಲಿ ಅವರು, ‘ಬಾಬರಿ ಮಸೀದಿ ನೆಲಸಮವನ್ನು ಸುಪ್ರೀಂ ಕೋರ್ಟ್, ‘ಘೋರವಾದ ಕ್ರಿಮಿನಲ್ ಕೃತ್ಯ’ ಎಂದು ಹೇಳಿತ್ತು ಎಂಬುದೂ ವಿದ್ಯಾರ್ಥಿಗಳಿಗೆ ತಿಳಿಯಬೇಕು’ ಎಂದಿದ್ದಾರೆ. </p>.<p>ಎನ್ಸಿಇಆರ್ಟಿ ತನ್ನ ಪರಿಷ್ಕೃತ ಪಠ್ಯಕ್ರಮದಲ್ಲಿ ಬಾಬರಿ ಮಸೀದಿಯನ್ನು ಮೂರು ಗೋಪುರಗಳಿದ್ದ ಸಂಕೀರ್ಣ ಎಂದು, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ‘ಒಮ್ಮತ’ಕ್ಕೆ ಉದಾಹರಣೆ ಎಂದು ಉಲ್ಲೇಖಿಸಿದೆ ಎಂದು ಅವರು ಹೇಳಿದ್ದಾರೆ.</p>.<p>ಮಸೀದಿಯನ್ನು ಗುಂಪೊಂದು 1992ರಲ್ಲಿ ನೆಲಸಮಗೊಳಿಸಿತು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಬೇಕು. ಅವರು ಅತಿರಂಜಿತ ಕ್ರಿಮಿನಲ್ ಕೃತ್ಯಗಳನ್ನು ಓದಿ ಬೆಳೆಯಬಾರದು ಎಂದು ಒವೈಸಿ ಪ್ರತಿಪಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>