ಶಿಂದೆ ಭೇಟಿಯ ಬಗ್ಗೆ ಮಾತನಾಡಿರುವ ಅಜಿತ್, 'ನಾನು ಎಲ್ಲಿಯಾದರೂ ಪ್ರಾರ್ಥನೆ ಸಲ್ಲಿಸುವಾಗ, ಈ ರೀತಿ ಪ್ರಚಾರ ಮಾಡುವುದಿಲ್ಲ. ಮುಖ್ಯಮಂತ್ರಿಯವರು ಆಶೀರ್ವಾದ ಪಡೆಯುವುದಕ್ಕಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ, ಅವರು ಬರುತ್ತಿದ್ದಾರೆ, ವಿಮಾನ ನಿಲ್ದಾಣದಲ್ಲಿದ್ದಾರೆ, ಅವರ ವಿಮಾನ ಟೇಕ್ಆಫ್ ಆಯಿತು ಎಂಬಿತ್ಯಾದಿ ಅಪ್ಡೇಟ್ ನೀಡುವ ಅಗತ್ಯವಿಲ್ಲ' ಎಂದು ಕುಟುಕಿದ್ದಾರೆ.