ಆಢಳಿತಾರೂಢ ಬಿಜೆಪಿ ಇಲ್ಲಿ ಅಭ್ಯರ್ಥಿಯನ್ನು ಘೋಷಿಸಬೇಕಿದೆ. ಎಸ್ಪಿ ಮಾಜಿ ಮಿತ್ರರು ಕ್ಷೇತ್ರದಲ್ಲಿ ಎಸ್ಪಿ ಸೋಲಲಿದೆ ಎಂದು ಅಂದಾಜಿಸಿದ್ದಾರೆ. ಸುಹಲ್ದೇವ್ ಎಸ್ಪಿ(ಎಸ್ಎಸ್ಪಿ) ಮಾಜಿ ಮಿತ್ರಪಕ್ಷವಾದ ಭಾರತೀಯ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮಾತ್ರವಲ್ಲದೇ, ಎಸ್ಪಿ ಸೋಲುತ್ತದೆ ಎಂದು ಲೆಕ್ಕಾಚಾರ ಹಾಕಿದೆ. ‘ಅಖಿಲೇಶ್ಗೆ ಸ್ನೇಹಿತರಿಗಿಂತ ಶತೃಗಳು ಹೆಚ್ಚಾಗಿದ್ದಾರೆ. ಅವರ ಕುಟುಂಬದಲ್ಲೇ ಎಲ್ಲವೂ ಸರಿಯಾಗಿಲ್ಲ. ಪಕ್ಷವು ಏಕಾಂಗಿಯಾಗಿದೆ. ವಿಭೂಷಣನಿಂದ ರಾವಣ ಸೋತಿದ್ದು ಎಂಬದುನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಸ್ಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಹೇಳಿದ್ದಾರೆ.