‘ಸೀತಾಪುರ ಜಿಲ್ಲೆಯಲ್ಲಿರುವ ಧಾರ್ಮಿಕ ನಗರ ನೈಮಿಶರಣ್ಯದಲ್ಲಿ ಕಾರ್ಯಕರ್ತರಿಗಾಗಿ ಮುಂದಿನ ತಿಂಗಳು ಎರಡು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ವೇದ ಮಂತ್ರಗಳ ಪಠಣ, ಭಜನೆಯೊಂದಿಗೆ ಶಿಬಿರ ಆರಂಭವಾಗಲಿದೆ. ಹೋಮ–ಹವನಗಳು ನಡೆಯಲಿವೆ. ಅಖಿಲೇಶ್ ಮತ್ತಿತರ ಹಿರಿಯ ನಾಯಕರು ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 5,000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.