<p>ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಮಧ್ಯೆ, ಹದಿನೈದು ದಿನಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಸುಮಾರು ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಹೀಗಾಗಿ, ಮಾಸ್ಕ್ ಹಾಕುವುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>ಕೋವಿಡ್ ರೋಗಿಗಳಿಗಾಗಿ ದೆಹಲಿಯಲ್ಲಿ ಲಭ್ಯವಿರುವ 9,405 ಹಾಸಿಗೆಗಳ ಪೈಕಿ ಆಗಸ್ಟ್ 1ರ ಹೊತ್ತಿಗೆ 307(ಶೇಕಡ 3.26), ಆಗಸ್ಟ್ 2ಕ್ಕೆ ಈ ಪ್ರಮಾಣ ಶೇಕಡ 3.75ಕ್ಕೆ ಏರಿತ್ತು. ಬಳಿಕ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರುತ್ತಲೇ ಇದ್ದು, ಆಗಸ್ಟ್ 16ರ ಹೊತ್ತಿಗೆ ಶೇಕಡ 6.24ರಷ್ಟು ಹಾಸಿಗೆಗಳು ಭರ್ತಿಯಾಗಿವೆ.</p>.<p>ಆಗಸ್ಟ್ 6ಕ್ಕೆ ಶೇಕಡ 5ರಷ್ಟಿದ್ದ ಹಾಸಿಗೆಗಳ ಭರ್ತಿ ಪ್ರಮಾಣ, ಆಗಸ್ಟ್ 11ರ ಹೊತ್ತಿಗೆ ಶೇಕಡ 5.97ಕ್ಕೆ ಏರಿತ್ತು. ಆಗಸ್ಟ್ 12ಕ್ಕೆ ಶೇಕಡ 6.13 ರಷ್ಟಾಗಿತ್ತು. ಆದರೆ, ಆಗಸ್ಟ್ 13ಕ್ಕೆ ಭಾಗಶಃ ಕಡಿಮೆಯಾಗಿ ಶೇಕಡ 5.99ಕ್ಕೆ ಬಂದಿತ್ತು. ಆದರೆ, ಆ ಬಳಿಕ ಪತ್ತೆ ಏರುಗತಿಯಲ್ಲಿ ಸಾಗಿದೆ.</p>.<p>ವೈರಲ್ ಸೋಂಕಿನ ಪರಿಣಾಮ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕ್ರಮೇಣ ಹೆಚ್ಚಿದೆ ಎಂದು ಫೋರ್ಟಿಸ್ ಆಸ್ಪತ್ರೆ ನಿರ್ದೇಶಗ ಡಾ ವಿಕಾಸ್ ಮೌರ್ಯ ತಿಳಿಸಿದ್ದಾರೆ.</p>.<p>‘ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಹಲವರು ಗಂಭೀರ ಆರೋಗ್ಯ ಸಮಸ್ಯೆ ಮತ್ತು ಲಸಿಕೆ ಹಾಕಿಸಿಕೊಳ್ಳದವರಾಗಿದ್ದಾರೆ. ಕೆಲವರಿಗೆ ಶ್ವಾಸಕೋಶದ ಸಮಸ್ಯೆ ಇದ್ದು, ಅವರಿಗೆ ಆ್ಯಂಟಿ–ವೈರಲ್ ಚಿಕಿತ್ಸೆಯ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.<br /><br />ರಾಜ್ಯ ಸರ್ಕಾರ ನಡೆಸುತ್ತಿರುವ ಎನ್ಎನ್ಜೆಪಿ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ಕಳೆದ ಒಂದು ವಾರದ ಆಸುಪಾಸಿನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿಂದೆ ದಿನ್ಕೆ 4ರಿಂದ 5 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈಗ ಆ ಸಂಖ್ಯೆ 8ರಿಂದ 10ಕ್ಕೆ ಏರಿದೆ’ ಎಂದು ಅವರು ಹೇಳಿದ್ದಾರೆ.</p>.<p>ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಕ್ಯೆ ಏರಿಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಂಗಳವಾರ ದೆಹಲಿ ಸರ್ಕಾರ ಹೇಳಿತ್ತು.</p>.<p>ರಾಜ್ಯದ ಎಲ್ಲ ಜನರು ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಮಾಡಿದ್ದರು.</p>.<p>‘ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಪೈಕಿ ಶೇಕಡ 90ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. 3ನೇ ಡೋಸ್ ಪಡೆದ ಶೇಕಡ 10ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ, ಮುನ್ನೆಚ್ಚರಿಕೆ ಡೋಸ್ ರಕ್ಷಣೆ ಒದಗಿಸುತ್ತದೆ ಎಂಬುದು ಸಾಬೀತಾಗಿದೆ’ಎಂದು ಅವರು ಹೇಳಿದ್ಧಾರೆ.</p>.<p>ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 917 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ದಿನದ ಪಾಸಿಟಿವಿಟಿ ದರ ಶೇಕಡ 19.20ಕ್ಕೆ ಏರಿತ್ತು. ಇದು ಕಳೆದ 200 ದಿನಗಳಲ್ಲೇ ಅತ್ಯಧಿಕವಾಗಿತ್ತು. ಮೂವರು ಕೋವಿಡ್ ರೋಗಿಗಳು ಸಾವಿಗೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಮಧ್ಯೆ, ಹದಿನೈದು ದಿನಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಸುಮಾರು ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಹೀಗಾಗಿ, ಮಾಸ್ಕ್ ಹಾಕುವುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>ಕೋವಿಡ್ ರೋಗಿಗಳಿಗಾಗಿ ದೆಹಲಿಯಲ್ಲಿ ಲಭ್ಯವಿರುವ 9,405 ಹಾಸಿಗೆಗಳ ಪೈಕಿ ಆಗಸ್ಟ್ 1ರ ಹೊತ್ತಿಗೆ 307(ಶೇಕಡ 3.26), ಆಗಸ್ಟ್ 2ಕ್ಕೆ ಈ ಪ್ರಮಾಣ ಶೇಕಡ 3.75ಕ್ಕೆ ಏರಿತ್ತು. ಬಳಿಕ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರುತ್ತಲೇ ಇದ್ದು, ಆಗಸ್ಟ್ 16ರ ಹೊತ್ತಿಗೆ ಶೇಕಡ 6.24ರಷ್ಟು ಹಾಸಿಗೆಗಳು ಭರ್ತಿಯಾಗಿವೆ.</p>.<p>ಆಗಸ್ಟ್ 6ಕ್ಕೆ ಶೇಕಡ 5ರಷ್ಟಿದ್ದ ಹಾಸಿಗೆಗಳ ಭರ್ತಿ ಪ್ರಮಾಣ, ಆಗಸ್ಟ್ 11ರ ಹೊತ್ತಿಗೆ ಶೇಕಡ 5.97ಕ್ಕೆ ಏರಿತ್ತು. ಆಗಸ್ಟ್ 12ಕ್ಕೆ ಶೇಕಡ 6.13 ರಷ್ಟಾಗಿತ್ತು. ಆದರೆ, ಆಗಸ್ಟ್ 13ಕ್ಕೆ ಭಾಗಶಃ ಕಡಿಮೆಯಾಗಿ ಶೇಕಡ 5.99ಕ್ಕೆ ಬಂದಿತ್ತು. ಆದರೆ, ಆ ಬಳಿಕ ಪತ್ತೆ ಏರುಗತಿಯಲ್ಲಿ ಸಾಗಿದೆ.</p>.<p>ವೈರಲ್ ಸೋಂಕಿನ ಪರಿಣಾಮ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕ್ರಮೇಣ ಹೆಚ್ಚಿದೆ ಎಂದು ಫೋರ್ಟಿಸ್ ಆಸ್ಪತ್ರೆ ನಿರ್ದೇಶಗ ಡಾ ವಿಕಾಸ್ ಮೌರ್ಯ ತಿಳಿಸಿದ್ದಾರೆ.</p>.<p>‘ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಹಲವರು ಗಂಭೀರ ಆರೋಗ್ಯ ಸಮಸ್ಯೆ ಮತ್ತು ಲಸಿಕೆ ಹಾಕಿಸಿಕೊಳ್ಳದವರಾಗಿದ್ದಾರೆ. ಕೆಲವರಿಗೆ ಶ್ವಾಸಕೋಶದ ಸಮಸ್ಯೆ ಇದ್ದು, ಅವರಿಗೆ ಆ್ಯಂಟಿ–ವೈರಲ್ ಚಿಕಿತ್ಸೆಯ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.<br /><br />ರಾಜ್ಯ ಸರ್ಕಾರ ನಡೆಸುತ್ತಿರುವ ಎನ್ಎನ್ಜೆಪಿ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ಕಳೆದ ಒಂದು ವಾರದ ಆಸುಪಾಸಿನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿಂದೆ ದಿನ್ಕೆ 4ರಿಂದ 5 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈಗ ಆ ಸಂಖ್ಯೆ 8ರಿಂದ 10ಕ್ಕೆ ಏರಿದೆ’ ಎಂದು ಅವರು ಹೇಳಿದ್ದಾರೆ.</p>.<p>ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಕ್ಯೆ ಏರಿಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಂಗಳವಾರ ದೆಹಲಿ ಸರ್ಕಾರ ಹೇಳಿತ್ತು.</p>.<p>ರಾಜ್ಯದ ಎಲ್ಲ ಜನರು ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಮಾಡಿದ್ದರು.</p>.<p>‘ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಪೈಕಿ ಶೇಕಡ 90ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. 3ನೇ ಡೋಸ್ ಪಡೆದ ಶೇಕಡ 10ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ, ಮುನ್ನೆಚ್ಚರಿಕೆ ಡೋಸ್ ರಕ್ಷಣೆ ಒದಗಿಸುತ್ತದೆ ಎಂಬುದು ಸಾಬೀತಾಗಿದೆ’ಎಂದು ಅವರು ಹೇಳಿದ್ಧಾರೆ.</p>.<p>ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 917 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ದಿನದ ಪಾಸಿಟಿವಿಟಿ ದರ ಶೇಕಡ 19.20ಕ್ಕೆ ಏರಿತ್ತು. ಇದು ಕಳೆದ 200 ದಿನಗಳಲ್ಲೇ ಅತ್ಯಧಿಕವಾಗಿತ್ತು. ಮೂವರು ಕೋವಿಡ್ ರೋಗಿಗಳು ಸಾವಿಗೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>