<p><strong>ನವದೆಹಲಿ:</strong> ‘ತಾಂತ್ರಿಕ ಕ್ರಾಂತಿಯು ಉದ್ಯೋಗ ನಷ್ಟದ ಬದಲು ವಿಭಿನ್ನ ರೀತಿಯ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಮಂಗಳವಾರ ಇಲ್ಲಿ ಹೇಳಿದರು.</p>.<p>ಇಂಡಿಯಾ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಉದ್ಯೋಗ ನಷ್ಟ’ ಎಂಬುದನ್ನು ತಳ್ಳಿಹಾಕಿದರು.</p>.<p>‘ಬೃಹತ್ ತಂತ್ರಜ್ಞಾನ ಸಂಸ್ಥೆಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಬದಲು, ಜನರ ಜೀವನಮಟ್ಟ ಸುಧಾರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದೇ ಎ.ಐ ಯಶಸ್ಸಿನ ನಿಜವಾದ ಮಾನದಂಡ ಆಗಿರಬೇಕು’ ಎಂದು ಹೇಳಿದರು.</p>.<p>ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಭಾರತ ಹೆಚ್ಚಿನ ದತ್ತಾಂಶ ಕೊಡುಗೆ ನೀಡುತ್ತಿದೆ ಎಂದರು.</p>.<p>ನೀಲನಕ್ಷೆ ಅನುಸರಿಸಲಿ: ‘ಡಿಜಿಟಲ್ ಮೂಲಸೌರ್ಕಯದ ನೀಲನಕ್ಷೆಯನ್ನು ಕೃತಕ ಬುದ್ಧಿಮತ್ತೆ (ಎ.ಐ) ಅನುಸರಿಸಬೇಕು. ಭಾರತದಲ್ಲಿ ಎಐ ಅಭಿವೃದ್ಧಿಯ ಮೂಲಗಳು ಮುಕ್ತವಾಗಿರಬೇಕು’ ಎಂದು ಹೇಳಿದರು.</p>.<p>ಯಾವೊಂದೂ ನಿಬಂಧನೆಗೆ ಒಳಪಡದೆ ಡಿಜಿಟಲ್ ಮೂಲಸೌಕರ್ಯ ಸೃಷ್ಟಿಗಾಗಿ ಬಳಕೆಯಾಗುವ ಎ.ಐ, ಅಸಮಾನತೆಯ ಸಮಾಜ ಸೃಷ್ಟಿಸುತ್ತದೆ ಎಂದೂ ಎಚ್ಚರಿಸಿದರು.</p>
<p><strong>ನವದೆಹಲಿ:</strong> ‘ತಾಂತ್ರಿಕ ಕ್ರಾಂತಿಯು ಉದ್ಯೋಗ ನಷ್ಟದ ಬದಲು ವಿಭಿನ್ನ ರೀತಿಯ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಮಂಗಳವಾರ ಇಲ್ಲಿ ಹೇಳಿದರು.</p>.<p>ಇಂಡಿಯಾ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಉದ್ಯೋಗ ನಷ್ಟ’ ಎಂಬುದನ್ನು ತಳ್ಳಿಹಾಕಿದರು.</p>.<p>‘ಬೃಹತ್ ತಂತ್ರಜ್ಞಾನ ಸಂಸ್ಥೆಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಬದಲು, ಜನರ ಜೀವನಮಟ್ಟ ಸುಧಾರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದೇ ಎ.ಐ ಯಶಸ್ಸಿನ ನಿಜವಾದ ಮಾನದಂಡ ಆಗಿರಬೇಕು’ ಎಂದು ಹೇಳಿದರು.</p>.<p>ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಭಾರತ ಹೆಚ್ಚಿನ ದತ್ತಾಂಶ ಕೊಡುಗೆ ನೀಡುತ್ತಿದೆ ಎಂದರು.</p>.<p>ನೀಲನಕ್ಷೆ ಅನುಸರಿಸಲಿ: ‘ಡಿಜಿಟಲ್ ಮೂಲಸೌರ್ಕಯದ ನೀಲನಕ್ಷೆಯನ್ನು ಕೃತಕ ಬುದ್ಧಿಮತ್ತೆ (ಎ.ಐ) ಅನುಸರಿಸಬೇಕು. ಭಾರತದಲ್ಲಿ ಎಐ ಅಭಿವೃದ್ಧಿಯ ಮೂಲಗಳು ಮುಕ್ತವಾಗಿರಬೇಕು’ ಎಂದು ಹೇಳಿದರು.</p>.<p>ಯಾವೊಂದೂ ನಿಬಂಧನೆಗೆ ಒಳಪಡದೆ ಡಿಜಿಟಲ್ ಮೂಲಸೌಕರ್ಯ ಸೃಷ್ಟಿಗಾಗಿ ಬಳಕೆಯಾಗುವ ಎ.ಐ, ಅಸಮಾನತೆಯ ಸಮಾಜ ಸೃಷ್ಟಿಸುತ್ತದೆ ಎಂದೂ ಎಚ್ಚರಿಸಿದರು.</p>