‘ಕಳೆದ ಶನಿವಾರ ಆರೋಪಿ ರಾಜೇಂದ್ರ ಶಿಂದೆಯ ಹುಟ್ಟುಹಬ್ಬವಿತ್ತು. ಮನೆಗೆಲಸ ಮಾಡುತ್ತಿದ್ದ ಆತನ ಪತ್ನಿ, ಕೆಲಸದ ಸ್ಥಳದಲ್ಲಿ ವಿಳಂಬವಾಗಿದ್ದರಿಂದ ಮರುದಿನ ಕೇಕ್ ತಂದು ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಈ ವೇಳೆ ಕೋಪಗೊಂಡ ಶಿಂದೆ, ಪತ್ನಿಯೊಂದಿಗೆ ಜಗಳ ಶುರು ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಪುತ್ರನಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಪುತ್ರನ ರಕ್ಷಣೆಗೆ ಮುಂದಾದ ಪತ್ನಿಯ ಮುಂಗೈಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.