<p><strong>ಸಂಭಲ್ (ಉತ್ತರ ಪ್ರದೇಶ):</strong> ದೀರ್ಘ ಕಾಲದಿಂದ ಮುಚ್ಚಿದ ಸ್ಥಿತಿಯಲ್ಲಿದ್ದ ಪುರಾತನ ಬಾವಿಯೊಂದು ಇಲ್ಲಿನ ಶಹಜಾದಿ ಸರಾಯ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ನಗರದ ವ್ಯಾಪ್ತಿಯಲ್ಲಿ ಬರುವ ಕ್ಷೇಮನಾಥ ತೀರ್ಥದ ಆವರಣದಲ್ಲಿ ಬಾವಿ ಪತ್ತೆಯಾಗಿರುವ ಮಾಹಿತಿ ಲಭಿಸಿದ್ದು, ಅಲ್ಲಿನ ಜನರು ಅದನ್ನು ಪುನರುಜ್ಜೀವನಗೊಳಿಸುವ ಕೆಲಸ ಕೈಗೊಂಡಿದ್ದಾರೆ’ ಎಂದು ಸಂಭಲ್ ಉಪ–ವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಸೋಮವಾರ ಹೇಳಿದ್ದಾರೆ.</p>.<p>‘ಮುಚ್ಚಿದ ಸ್ಥಿತಿಯಲ್ಲಿದ್ದ ಬಾವಿಯನ್ನು ತೆರೆಯಲಾಗಿದ್ದು, ಸುಮಾರು ಎಂಟು ಅಡಿ ಆಳದಲ್ಲಿ ನೀರು ಇದೆ. ಪುರಾತನ ಬಾವಿಯಲ್ಲಿ ಶುದ್ಧ ನೀರು ಇರುವುದು ಪವಾಡವೇ ಸರಿ’ ಎಂದು ಕ್ಷೇಮನಾಥ ತೀರ್ಥದ ಪ್ರಧಾನ ಅರ್ಚಕ ಮಹಾಂತ ಬಾಲಯೋಗಿ ದೀನಾನಾಥ ತಿಳಿಸಿದ್ದಾರೆ.</p>.<p class="bodytext">‘ಪುರಾತನ ಬಾವಿಯು ಈ ಐತಿಹಾಸಿಕ ಯಾತ್ರಾಸ್ಥಳದಲ್ಲಿ ನೀರಿನ ಪ್ರಮುಖ ಮೂಲ ಆಗಿತ್ತು. ಈ ಹಿಂದೆ ಕ್ಷೇಮನಾಥ ತೀರ್ಥಕ್ಕೆ ಬರುವ ಭಕ್ತರು ಇದೇ ಬಾವಿಯ ನೀರನ್ನು ಬಳಸುತ್ತಿದ್ದರು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭಲ್ (ಉತ್ತರ ಪ್ರದೇಶ):</strong> ದೀರ್ಘ ಕಾಲದಿಂದ ಮುಚ್ಚಿದ ಸ್ಥಿತಿಯಲ್ಲಿದ್ದ ಪುರಾತನ ಬಾವಿಯೊಂದು ಇಲ್ಲಿನ ಶಹಜಾದಿ ಸರಾಯ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ನಗರದ ವ್ಯಾಪ್ತಿಯಲ್ಲಿ ಬರುವ ಕ್ಷೇಮನಾಥ ತೀರ್ಥದ ಆವರಣದಲ್ಲಿ ಬಾವಿ ಪತ್ತೆಯಾಗಿರುವ ಮಾಹಿತಿ ಲಭಿಸಿದ್ದು, ಅಲ್ಲಿನ ಜನರು ಅದನ್ನು ಪುನರುಜ್ಜೀವನಗೊಳಿಸುವ ಕೆಲಸ ಕೈಗೊಂಡಿದ್ದಾರೆ’ ಎಂದು ಸಂಭಲ್ ಉಪ–ವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಸೋಮವಾರ ಹೇಳಿದ್ದಾರೆ.</p>.<p>‘ಮುಚ್ಚಿದ ಸ್ಥಿತಿಯಲ್ಲಿದ್ದ ಬಾವಿಯನ್ನು ತೆರೆಯಲಾಗಿದ್ದು, ಸುಮಾರು ಎಂಟು ಅಡಿ ಆಳದಲ್ಲಿ ನೀರು ಇದೆ. ಪುರಾತನ ಬಾವಿಯಲ್ಲಿ ಶುದ್ಧ ನೀರು ಇರುವುದು ಪವಾಡವೇ ಸರಿ’ ಎಂದು ಕ್ಷೇಮನಾಥ ತೀರ್ಥದ ಪ್ರಧಾನ ಅರ್ಚಕ ಮಹಾಂತ ಬಾಲಯೋಗಿ ದೀನಾನಾಥ ತಿಳಿಸಿದ್ದಾರೆ.</p>.<p class="bodytext">‘ಪುರಾತನ ಬಾವಿಯು ಈ ಐತಿಹಾಸಿಕ ಯಾತ್ರಾಸ್ಥಳದಲ್ಲಿ ನೀರಿನ ಪ್ರಮುಖ ಮೂಲ ಆಗಿತ್ತು. ಈ ಹಿಂದೆ ಕ್ಷೇಮನಾಥ ತೀರ್ಥಕ್ಕೆ ಬರುವ ಭಕ್ತರು ಇದೇ ಬಾವಿಯ ನೀರನ್ನು ಬಳಸುತ್ತಿದ್ದರು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>