ಆರ್ಎಸ್ಎಸ್ ಮತ್ತು ಬಿಜೆಪಿ ನೆಹರೂ-ಗಾಂಧಿ ಕುಟುಂಬವನ್ನು ನಾಯಕತ್ವದಿಂದ ಹೊರಗಿಡಬೇಕು ಎಂದು ಏಕೆ ಬಯಸುತ್ತಿದೆ? ಕಾರಣ ಗಾಂಧಿ ಕುಟುಂಬದ ನಾಯಕತ್ವವಿಲ್ಲದ ಕಾಂಗ್ರೆಸ್ ಜನತಾ ಪಕ್ಷವಾಗಲಿದೆ. ಇದರಿಂದ ಕಾಂಗ್ರೆಸ್ಅನ್ನು ಸಾಯಿಸುವುದು ಸುಲಭ. ನಂತರ ಭಾರತದ ಜಾತ್ಯತೀತ ಚಿಂತನೆಯನ್ನು ಸಾಯಿಸುವುದು ಸುಲಭವಾಗಲಿದೆ. ಇದು ಕಪಿಲ್ ಸಿಬಲ್ ಅವರಿಗೆ ಗೊತ್ತಿದೆ. ಹಾಗಿದ್ದು ಅವರೇಕೆ ಆರ್ಎಸ್ಎಸ್, ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ?' ಎಂದು ಠಾಗೂರ್ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.