ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಮಾತನಾಡಿರುವ ಅವರು, ಯಾವುದೇ ಮುಸ್ಲಿಂ ಮಹಿಳೆಯ ಅಭಿಪ್ರಾಯವನ್ನು ಕೇಳಿನೋಡಿ. ತ್ರಿವಳಿ ತಲಾಕ್ ತೆಗೆದ ಬಳಿಕ, ಅವರಿಗೆ ಅನುಕೂಲವಾಗಿದೆ. ಅದೇ ರೀತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕಿದೆ. ಅದರಿಂದ ಮಾತ್ರವೇ ಅವರಿಗೆ ನ್ಯಾಯ ದೊರೆಯಬಹುದು ಎಂದು ಸುದ್ದಿಸಂಸ್ಥೆ ‘ಎಎನ್ಐ‘ ಜತೆ ಮಾತನಾಡುತ್ತಾ ಅಸ್ಸಾಂ ಸಿಎಂ ಹೇಳಿದ್ದಾರೆ.