ಏಮ್ಸ್ಗೆ ಭೇಟಿ ನೀಡಿ ಹೊರಬಂದ ಗೃಹ ಸಚಿವ ರಾಜನಾಥ್ ಸಿಂಗ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಮಾಧ್ಯಮಗಳು, ’ಹಿರಿಯ ರಾಜಕಾರಣಿ, ಕವಿ ವಾಜಪೇಯಿ’ ಅವರ ನಿಧನದ ಸುದ್ದಿಗಳನ್ನು ಪ್ರಕಟಿಸಿದವು. ಟ್ವಿಟರ್, ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಛಲವಾದಿಗೆ ಅಂತಿಮ ನಮನ ಸಲ್ಲಿಸಲಾಯಿತು.