<p><strong>ನವದೆಹಲಿ:</strong> ಡ್ರೋನ್ ದಾಳಿಗೆ ಈಡಾಗಿದ್ದ ಲೈಬೀರಿಯಾದ ಹಡಗಿನಲ್ಲಿ ಇದ್ದ 13 ಮಂದಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಈ ಹಡಗಿನ ಮೇಲೆ ಮಾರ್ಚ್ 4ರಂದು ಏಡನ್ ಕೊಲ್ಲಿಯಲ್ಲಿ ಡ್ರೋನ್ ದಾಳಿ ನಡೆದಿತ್ತು. </p>.<p>ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್ಎಸ್ ಕೋಲ್ಕತ್ತ ನೌಕೆಯನ್ನು ರವಾನಿಸಿತ್ತು. ಹಡಗಿನ ಮಾಸ್ಟರ್ ಕೋರಿಕೆಯ ಅನ್ವಯ ಅದನ್ನು ದಾಳಿ ನಡೆದ ಸ್ಥಳದಿಂದ ಜಿಬೌತಿ ದೇಶದ ಜಲಪ್ರದೇಶಕ್ಕೆ ಸುರಕ್ಷಿತವಾಗಿ ಸೇರಿಸಲಾಯಿತು ಎಂದು ನೌಕಾಪಡೆ ಹೇಳಿದೆ.</p>.<p>ಭಾರತೀಯ ಸೇನೆಯ 12 ಮಂದಿ ಸಿಬ್ಬಂದಿ ಈ ಹಡಗನ್ನು ಮಂಗಳವಾರ ಪ್ರವೇಶಿಸಿದ್ದರು. ಅವರಲ್ಲಿ ಅಗ್ನಿಶಾಮಕ ತಜ್ಞರು ಕೂಡ ಇದ್ದರು. ಅವರು ದಾಳಿಯ ಸಂದರ್ಭದಲ್ಲಿ ಉಂಟಾಗಿದ್ದ ಬೆಂಕಿಯನ್ನು ನಂದಿಸುವಲ್ಲಿ ನೆರವಾದರು ಎಂದು ಹೇಳಿದೆ.</p>.<p>ಈಗ ಹಡಗು ತನ್ನ ಮುಂದಿನ ಬಂದರಿನತ್ತ ಸಾಗಿದೆ ಎಂದು ಹೇಳಿದೆ.</p>.<p>ಕೆಂಪು ಸಮುದ್ರ ಪ್ರದೇಶದಲ್ಲಿ ಹುಥಿ ಬಂಡುಕೋರರು ಸರಕು ಸಾಗಣೆ ಹಡಗುಗಳ ಮೇಲೆ ಈಚಿನ ದಿನಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಚಿನ ವಾರಗಳಲ್ಲಿ ಭಾರತೀಯ ನೌಕಾಪಡೆಯು ದಾಳಿಗೆ ಗುರಿಯಾದ ಹಲವು ಹಡಗುಗಳಿಗೆ ನೆರವಿನ ಹಸ್ತ ಚಾಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಡ್ರೋನ್ ದಾಳಿಗೆ ಈಡಾಗಿದ್ದ ಲೈಬೀರಿಯಾದ ಹಡಗಿನಲ್ಲಿ ಇದ್ದ 13 ಮಂದಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಈ ಹಡಗಿನ ಮೇಲೆ ಮಾರ್ಚ್ 4ರಂದು ಏಡನ್ ಕೊಲ್ಲಿಯಲ್ಲಿ ಡ್ರೋನ್ ದಾಳಿ ನಡೆದಿತ್ತು. </p>.<p>ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್ಎಸ್ ಕೋಲ್ಕತ್ತ ನೌಕೆಯನ್ನು ರವಾನಿಸಿತ್ತು. ಹಡಗಿನ ಮಾಸ್ಟರ್ ಕೋರಿಕೆಯ ಅನ್ವಯ ಅದನ್ನು ದಾಳಿ ನಡೆದ ಸ್ಥಳದಿಂದ ಜಿಬೌತಿ ದೇಶದ ಜಲಪ್ರದೇಶಕ್ಕೆ ಸುರಕ್ಷಿತವಾಗಿ ಸೇರಿಸಲಾಯಿತು ಎಂದು ನೌಕಾಪಡೆ ಹೇಳಿದೆ.</p>.<p>ಭಾರತೀಯ ಸೇನೆಯ 12 ಮಂದಿ ಸಿಬ್ಬಂದಿ ಈ ಹಡಗನ್ನು ಮಂಗಳವಾರ ಪ್ರವೇಶಿಸಿದ್ದರು. ಅವರಲ್ಲಿ ಅಗ್ನಿಶಾಮಕ ತಜ್ಞರು ಕೂಡ ಇದ್ದರು. ಅವರು ದಾಳಿಯ ಸಂದರ್ಭದಲ್ಲಿ ಉಂಟಾಗಿದ್ದ ಬೆಂಕಿಯನ್ನು ನಂದಿಸುವಲ್ಲಿ ನೆರವಾದರು ಎಂದು ಹೇಳಿದೆ.</p>.<p>ಈಗ ಹಡಗು ತನ್ನ ಮುಂದಿನ ಬಂದರಿನತ್ತ ಸಾಗಿದೆ ಎಂದು ಹೇಳಿದೆ.</p>.<p>ಕೆಂಪು ಸಮುದ್ರ ಪ್ರದೇಶದಲ್ಲಿ ಹುಥಿ ಬಂಡುಕೋರರು ಸರಕು ಸಾಗಣೆ ಹಡಗುಗಳ ಮೇಲೆ ಈಚಿನ ದಿನಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಚಿನ ವಾರಗಳಲ್ಲಿ ಭಾರತೀಯ ನೌಕಾಪಡೆಯು ದಾಳಿಗೆ ಗುರಿಯಾದ ಹಲವು ಹಡಗುಗಳಿಗೆ ನೆರವಿನ ಹಸ್ತ ಚಾಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>