ಡೆಹ್ರಾಡೂನ್: ಪ್ರಖ್ಯಾತ ತೀರ್ಥ ಕ್ಷೇತ್ರ ಬದರೀನಾಥ ದೇಗುಲ ಇಂದು ಬೆಳಿಗ್ಗೆ 7.10 ಕ್ಕೆ ಭಕ್ತರಿಗೆ ತೆರೆಯಲಾಯಿತು. ಮಂತ್ರಘೋಷಗಳ ಉದ್ಗಾರದೊಂದಿಗೆ ಬಾಗಿಲು ತೆರೆಯಲಾಯ್ತು.
ಇಡೀ ದೇಗುಲವನ್ನು 15 ಕ್ವಿಂಟಲ್ ಹೂಗಳಿಂದ ಸಿಂಗರಿಸಲಾಗಿತ್ತು. ದೇಗುವದ ಬಾಗಿಲು ತೆರೆಯುವ ವೇಳೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತ್ತು. ಕೀರ್ತನೆಗಳನ್ನು ಹಾಡಿ, ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ದೇಗುಲದಲ್ಲಿ ವಿವಿಧ ಪೂಜೆಗಳು ಜರುಗಿದವು.
ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿರುವ ಬದರೀನಾಥ ಧಾಮವು, ವಿಷ್ಣುವಿನ ದೇಗುಲವಾಗಿದೆ.
ಮಂಗಳವಾರ ಕೇದರನಾಥ ದೇಗುಲವು ವರ್ಷದ ಪೂಜೆಗೆ ತೆರೆಯಲಾಗಿತ್ತು. ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಿರ್ವಹಿಸಲಾಗಿತ್ತು.