<p class="title"><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ತೀವ್ರ ಸ್ವರೂಪದ ಗಲಭೆಗೆ ಪ್ರಚೋದನೆ ನೀಡಲು ಸಂಚು ನಡೆಸಿದ್ದ ಆರೋಪದಡಿ ಇಸ್ಲಾಮಿಸ್ಟ್ ಗುಂಪಿನ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p class="title">ಪೊಲೀಸರು ಮತ್ತು ಗುಪ್ತದಳ ಸಿಬ್ಬಂದಿ ಇದ್ದ ಜಂಟಿ ತಂಡವು ಢಾಕಾದ ಮೊಹಮದ್ಪುರ್ನ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಹೆಫಜತ್ ಎ ಇಸ್ಲಾಂ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಮಮುನುಲ್ ಹಕ್ ಅವರನ್ನು ಬಂಧಿಸಿತು. ಇತ್ತೀಚಿನ ಕೆಲ ವಿವಾದಗಳಿಂದ ಅವರ ಹೆಸರು ಚರ್ಚೆಯಲ್ಲಿತ್ತು.</p>.<p class="title">ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಂಭದಲ್ಲಿ ಪ್ರತಿಭಟಿಸಿ, ಬಂಧನವನ್ನು ತಡೆಯಲು ಯತ್ನಿಸಿದರು. ಆದರೂ, ಮೊದಲ ಮಹಡಿಯಲ್ಲಿ ಇದ್ದ 47 ವರ್ಷದ ಹಕ್ ಅವರನ್ನು ಬಂಧಿಸಲಾಯಿತು ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ನ ಜಂಟಿ ಆಯುಕ್ತ ಮಹಬೂಬ್ ಅಲಂ ತಿಳಿಸಿದರು.</p>.<p class="title">ಇವರ ಚಟುವಟಿಕೆ ಮೇಲೆ ಕೆಲ ದಿನಗಳಿಂದ ನಿಗಾ ಇರಿಸಲಾಗಿತ್ತು. ಬೈಟುಲ್ ಮುಕರಂ ರಾಷ್ಟ್ರೀಯ ಮಸೀದಿ ಬಳಿ ನಡೆದಿದ್ದ ಹಿಂಸೆಗೆ ಸಂಬಂಧಿಸಿ ಹಲವು ಪ್ರಕರಣಗಳನ್ನು ಇವರ ಮೇಲೆ ಹಾಕಲಾಗಿದೆ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ತೀವ್ರ ಸ್ವರೂಪದ ಗಲಭೆಗೆ ಪ್ರಚೋದನೆ ನೀಡಲು ಸಂಚು ನಡೆಸಿದ್ದ ಆರೋಪದಡಿ ಇಸ್ಲಾಮಿಸ್ಟ್ ಗುಂಪಿನ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p class="title">ಪೊಲೀಸರು ಮತ್ತು ಗುಪ್ತದಳ ಸಿಬ್ಬಂದಿ ಇದ್ದ ಜಂಟಿ ತಂಡವು ಢಾಕಾದ ಮೊಹಮದ್ಪುರ್ನ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಹೆಫಜತ್ ಎ ಇಸ್ಲಾಂ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಮಮುನುಲ್ ಹಕ್ ಅವರನ್ನು ಬಂಧಿಸಿತು. ಇತ್ತೀಚಿನ ಕೆಲ ವಿವಾದಗಳಿಂದ ಅವರ ಹೆಸರು ಚರ್ಚೆಯಲ್ಲಿತ್ತು.</p>.<p class="title">ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಂಭದಲ್ಲಿ ಪ್ರತಿಭಟಿಸಿ, ಬಂಧನವನ್ನು ತಡೆಯಲು ಯತ್ನಿಸಿದರು. ಆದರೂ, ಮೊದಲ ಮಹಡಿಯಲ್ಲಿ ಇದ್ದ 47 ವರ್ಷದ ಹಕ್ ಅವರನ್ನು ಬಂಧಿಸಲಾಯಿತು ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ನ ಜಂಟಿ ಆಯುಕ್ತ ಮಹಬೂಬ್ ಅಲಂ ತಿಳಿಸಿದರು.</p>.<p class="title">ಇವರ ಚಟುವಟಿಕೆ ಮೇಲೆ ಕೆಲ ದಿನಗಳಿಂದ ನಿಗಾ ಇರಿಸಲಾಗಿತ್ತು. ಬೈಟುಲ್ ಮುಕರಂ ರಾಷ್ಟ್ರೀಯ ಮಸೀದಿ ಬಳಿ ನಡೆದಿದ್ದ ಹಿಂಸೆಗೆ ಸಂಬಂಧಿಸಿ ಹಲವು ಪ್ರಕರಣಗಳನ್ನು ಇವರ ಮೇಲೆ ಹಾಕಲಾಗಿದೆ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>