ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಡಿಜಿಪಿಗೆ ಸೂಚನೆ ನೀಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಆನಂತರ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್, ಯಾತ್ರೆಗೆ ಈವರೆಗೆ ಸಿಗದಿರುವ ಪ್ರಚಾರವನ್ನು ಅಸ್ಸಾಂ ಸಿಎಂ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನೀಡುತ್ತಿದ್ದಾರೆ. ಇದೆಲ್ಲ ಅವರ ಬೆದರಿಕೆಯ ತಂತ್ರಗಳು. ನಮ್ಮ ಸಂದೇಶ ಜನರನ್ನು ತಲುಪುತ್ತಿದೆ’ ಎಂದು ಹೇಳಿದರು.