<p><strong>ನವದೆಹಲಿ:</strong> ‘ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ‘</p>.<p>– ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಣ ತಿಕ್ಕಾಟ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರಿಸಿದ ರೀತಿ ಇದು.</p>.<p>ಅಶೋಕ್ ಗೆಹಲೋತ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ. ಕೆಲವೊಂದು ವಿಚಾರಗಳಲ್ಲಿ ಒಮ್ಮತ ಇದೆ. ಭಿನ್ನಾಭಿಪ್ರಾಯ ಇದ್ದರೆ ಸಮಸ್ಯೆ ಅಲ್ಲ. ರಾಜಸ್ಥಾನದಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ಬೇರೆ ರಾಜ್ಯಗಳಲ್ಲೂ ಇದೆ. ಪಕ್ಷದ ಕೇಂದ್ರ ಮಟ್ಟದಲ್ಲೂ ಭಿನ್ನಾಭಿಪ್ರಾಯ ಇದೆ. ಇದು ಕೆಲಸ ಮಾಡುವುದೇ ಹಾಗೆ‘ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>‘ನಾವು ಇದನ್ನು (ಭಿನ್ನಾಭಿಪ್ರಾಯ) ಸಹಿಸಿಕೊಳ್ಳುತ್ತೇವೆ. ಇದು ದೊಡ್ಡ ಹಾನಿ ಉಂಟು ಮಾಡಬಾರದು. ಹಾಗೆನಾದರೂ ಆದರೆ ನಾವು ಕ್ರಮತೆಗೆದುಕೊಳ್ಳುತ್ತೇವೆ. ಪಕ್ಷದ ಯಾರೇ ಮಾತನಾಡುವುದಿದ್ದರೂ ನಾವು ಅವರನ್ನು ತಡೆಯುವುದಿಲ್ಲ. ನಮ್ಮ ನೀತಿಯೇ ಹಾಗೆ‘ ಎಂದು ರಾಹುಲ್ ನುಡಿದಿದ್ದಾರೆ.</p>.<p>ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ, ‘ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೇಳಿ. ಅವರು ಪಕ್ಷದ ಅಧ್ಯಕ್ಷರು‘ ಎಂದು ರಾಹುಲ್ ಉತ್ತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ‘</p>.<p>– ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಣ ತಿಕ್ಕಾಟ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರಿಸಿದ ರೀತಿ ಇದು.</p>.<p>ಅಶೋಕ್ ಗೆಹಲೋತ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ. ಕೆಲವೊಂದು ವಿಚಾರಗಳಲ್ಲಿ ಒಮ್ಮತ ಇದೆ. ಭಿನ್ನಾಭಿಪ್ರಾಯ ಇದ್ದರೆ ಸಮಸ್ಯೆ ಅಲ್ಲ. ರಾಜಸ್ಥಾನದಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ಬೇರೆ ರಾಜ್ಯಗಳಲ್ಲೂ ಇದೆ. ಪಕ್ಷದ ಕೇಂದ್ರ ಮಟ್ಟದಲ್ಲೂ ಭಿನ್ನಾಭಿಪ್ರಾಯ ಇದೆ. ಇದು ಕೆಲಸ ಮಾಡುವುದೇ ಹಾಗೆ‘ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>‘ನಾವು ಇದನ್ನು (ಭಿನ್ನಾಭಿಪ್ರಾಯ) ಸಹಿಸಿಕೊಳ್ಳುತ್ತೇವೆ. ಇದು ದೊಡ್ಡ ಹಾನಿ ಉಂಟು ಮಾಡಬಾರದು. ಹಾಗೆನಾದರೂ ಆದರೆ ನಾವು ಕ್ರಮತೆಗೆದುಕೊಳ್ಳುತ್ತೇವೆ. ಪಕ್ಷದ ಯಾರೇ ಮಾತನಾಡುವುದಿದ್ದರೂ ನಾವು ಅವರನ್ನು ತಡೆಯುವುದಿಲ್ಲ. ನಮ್ಮ ನೀತಿಯೇ ಹಾಗೆ‘ ಎಂದು ರಾಹುಲ್ ನುಡಿದಿದ್ದಾರೆ.</p>.<p>ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ, ‘ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೇಳಿ. ಅವರು ಪಕ್ಷದ ಅಧ್ಯಕ್ಷರು‘ ಎಂದು ರಾಹುಲ್ ಉತ್ತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>