ಬೈಕ್ ಸವಾರರಾದ ರಜತ್ ಪಾರಾಶರ್ ಮತ್ತು ಸಾರ್ಥಕ್, ಯಾತ್ರೆ ಸಂದರ್ಭದಲ್ಲಿ ರಾಹುಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರ ಜೊತೆಗೆ ತಂದಿದ್ದ ಜರ್ಮನ್ ಶೆಫರ್ಡ್ ಶ್ವಾನದೊಂದಿಗೆ ರಾಹುಲ್ ಕಾಣಿಸಿಕೊಂಡರು.
ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ರಜತ್, ರಾಹುಲ್ ಗಾಂಧಿ ಕೂಡ ಪ್ರಾಣಿ ಪ್ರೇಮಿಯಾಗಿದ್ದು, ಅದ್ಭುತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ರಸ್ತೆಯಲ್ಲಿನಡೆಯುತ್ತಿರುವ ಪ್ರಾಣಿಗಳ ಸಾವಿನ ಬಗ್ಗೆ ಚರ್ಚಿಸಲು ಬಯಸಿದ್ದೆ ಎಂದು ಹೇಳಿದರು.