ಇದಕ್ಕೂ ಮುನ್ನ ವಾದ ಮಂಡಿಸಿದ ಉಮಾ ಕೃಷ್ಣಯ್ಯ ಪರ ವಕೀಲ ಸಿದ್ಧಾರ್ಥ ಲೂಥ್ರ, ‘ಬಿಹಾರ ಸರ್ಕಾರವು ಪೂರ್ವಾನ್ವಯವಾಗುವಂತೆ ಕಾನೂನನ್ನು ಬದಲಾಯಿಸಿ, ಆನಂದ್ ಮೋಹನ್ ಅವರನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದೆ. ಮೋಹನ್ ಎಸಗಿದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಬೇಕು ಹಾಗೂ ವಿಚಾರಣೆಯನ್ನು ಆಗಸ್ಟ್ನಲ್ಲಿ ನಡೆಸಬೇಕು’ ಎಂದು ಕೋರಿದರು.