<p><strong>ಬೆಂಗಳೂರು:</strong> ಆಂಧ್ರಪ್ರದೇಶದ ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ದುರಂತದಲ್ಲಿ ಕಾವೇರಿ ಟ್ರ್ಯಾವೆಲ್ಸ್ಗೆ ಸೇರಿದ ವೋಲ್ವೊ ಬಸ್ ಸುಟ್ಟು ಕರಕಲಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದು ನೆಲಸಿದ್ದ ಎಂಟು ಮಂದಿ ಸಜೀವ ದಹನವಾಗಿದ್ದಾರೆ. </p>.<p>ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಹಾಗೂ ನಾಲ್ವರು ಸಾಫ್ಟ್ವೇರ್ ಎಂಜಿನಿಯರ್ಗಳು ಮೃತಪಟ್ಟಿದ್ದಾರೆ.</p>.<p>ಟೆಕಿಯೊಬ್ಬರು ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಎಲ್ಲರೂ ಆಂಧ್ರಪ್ರದೇಶದವರಾಗಿದ್ದು, ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ನೆಲಸಿದ್ದರು ಎಂದು ತಿಳಿದುಬಂದಿದೆ. </p>.<p>ಬೆಂಗಳೂರಿಗೆ ಬಸ್ನಲ್ಲಿ ಬರುತ್ತಿದ್ದವರೆಲ್ಲರೂ ದೀಪಾವಳಿ ಹಬ್ಬಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ಸಂತೋಷದಿಂದಲೇ ಗುರುವಾರ ರಾತ್ರಿ ಬಸ್ ಹತ್ತಿದ್ದರು. ಕುಟುಂಬಸ್ಥರೂ ನಗುಮೊಗದಿಂದಲೇ ಅವರನ್ನು ಬೀಳ್ಕೊಟ್ಟಿದ್ದರು. ಆದರೆ, ಮಾರ್ಗಮಧ್ಯೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾರೆ.</p>.<p>‘ನಗರದಲ್ಲೇ ಉದ್ಯೋಗ ಮಾಡಿಕೊಂಡು ನೆಲಸಿದ್ದ ಎಂಟು ಮಂದಿ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ತಂಡವು ಕರ್ನೂಲ್ಗೆ ತೆರಳಿದೆ. ನಗರದಲ್ಲಿ ನೆಲಸಿದ್ದವರು ಇನ್ನೂ ಯಾರಾದರೂ ತೊಂದರೆಗೆ ಸಿಲುಕಿದ್ದಾರೆಯೇ ಎಂಬುದರ ಕುರಿತು ತಂಡವು ಪರಿಶೀಲನೆ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಆಂಧ್ರಪ್ರದೇಶದ ನೆಲ್ಲೂರಿನ ಗೊಳ್ಳ ರಮೇಶ್ (38) ಅವರ ಕುಟುಂಬವು ನಗರದ ಕಮ್ಮನಹಳ್ಳಿಯಲ್ಲಿ ನೆಲಸಿತ್ತು. ಪತ್ನಿ ಅನುಷಾ (35), ಮಕ್ಕಳಾದ ಶಶಾಂಕ್ (12) ಹಾಗೂ ಮಾನ್ವಿತಾ (10) ಜತೆಗೆ ಹಬ್ಬಕ್ಕೆ ಊರಿಗೆ ತೆರಳಿದ್ದರು. ಈ ಕುಟುಂಬವು ದುರಂತಕ್ಕೀಡಾದ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಪುಟ್ಟ ಮಕ್ಕಳು, ದಂಪತಿ ನಿದ್ರೆಯಲ್ಲಿ ಇದ್ದರು. ಹೊರಕ್ಕೆ ಬರಲು ಸಾಧ್ಯವಾಗದೇ ಇಡೀ ಕುಟುಂಬವೇ ಅಗ್ನಿಯಲ್ಲಿ ಬೆಂದು ಹೋಗಿದೆ.</p>.<p>ಇದೇ ಬಸ್ನಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ಗಳಾದ ಮೇಘನಾಥ್(24), ಅನುಷಾ ರೆಡ್ಡಿ(26), ಚಂದನಾ ಹಾಗೂ ಜಿ.ಧಾತ್ರಿ ಅವರೂ ದುರಂತ ಅಂತ್ಯ ಕಂಡಿದ್ದಾರೆ.</p>.<p>ಯಾದಾದ್ರಿಯ ನಿವಾಸಿ ಅನುಷಾ ರೆಡ್ಡಿ ಅವರು ಹೈದರಾಬಾದ್ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ, ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಅನುಷಾ ಅವರು ಅವಘಡದಲ್ಲಿ ಬೆಂದು ಹೋಗಿದ್ದಾರೆ. ಟೆಕಿ ವೇಣುಗೊಂಡ ಎಂಬುವವರು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.</p>.<p>‘ಕಣ್ಮುಂದೆಯೇ ಬಸ್ ಹೊತ್ತಿ ಉರಿಯುತ್ತಿದ್ದರೂ ಇತರೆ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಎಲ್–13 ಸಂಖ್ಯೆಯ ಸೀಟ್ನಲ್ಲಿದ್ದೆ. ತುರ್ತುನಿರ್ಗಮನ ದ್ವಾರ ತೆರೆದುಕೊಳ್ಳಲಿಲ್ಲ. ಬಳಿಕ, ಅದರ ಗಾಜು ಒಡೆದು 15 ಮಂದಿ ಹೊರಕ್ಕೆ ಬಂದೆವು. ಉಳಿದವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ’ ಎಂದು ವೇಣುಗೊಂಡ ತಿಳಿಸಿದ್ದಾರೆ.</p>.<p>‘ಅಗ್ನಿ ಅನಾಹುತಕ್ಕೀಡಾದ ಬಸ್, ದೇಶದಾದ್ಯಂತ ಸಂಚರಿಸುವ ಪರವಾನಗಿ ಹೊಂದಿತ್ತು. ಬೆಂಗಳೂರು ಸೇರಿ ಹೊರರಾಜ್ಯದ ಬೇರೆ ನಗರಕ್ಕೂ ಈ ಬಸ್ ತೆರಳುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ದೀಪಾವಳಿ ಹಬ್ಬದ ಕಾರಣಕ್ಕೆ ಈ ಬಸ್ ಬೆಂಗಳೂರಿಗೆ ಬರುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಂಧ್ರಪ್ರದೇಶದ ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ದುರಂತದಲ್ಲಿ ಕಾವೇರಿ ಟ್ರ್ಯಾವೆಲ್ಸ್ಗೆ ಸೇರಿದ ವೋಲ್ವೊ ಬಸ್ ಸುಟ್ಟು ಕರಕಲಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದು ನೆಲಸಿದ್ದ ಎಂಟು ಮಂದಿ ಸಜೀವ ದಹನವಾಗಿದ್ದಾರೆ. </p>.<p>ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಹಾಗೂ ನಾಲ್ವರು ಸಾಫ್ಟ್ವೇರ್ ಎಂಜಿನಿಯರ್ಗಳು ಮೃತಪಟ್ಟಿದ್ದಾರೆ.</p>.<p>ಟೆಕಿಯೊಬ್ಬರು ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಎಲ್ಲರೂ ಆಂಧ್ರಪ್ರದೇಶದವರಾಗಿದ್ದು, ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ನೆಲಸಿದ್ದರು ಎಂದು ತಿಳಿದುಬಂದಿದೆ. </p>.<p>ಬೆಂಗಳೂರಿಗೆ ಬಸ್ನಲ್ಲಿ ಬರುತ್ತಿದ್ದವರೆಲ್ಲರೂ ದೀಪಾವಳಿ ಹಬ್ಬಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ಸಂತೋಷದಿಂದಲೇ ಗುರುವಾರ ರಾತ್ರಿ ಬಸ್ ಹತ್ತಿದ್ದರು. ಕುಟುಂಬಸ್ಥರೂ ನಗುಮೊಗದಿಂದಲೇ ಅವರನ್ನು ಬೀಳ್ಕೊಟ್ಟಿದ್ದರು. ಆದರೆ, ಮಾರ್ಗಮಧ್ಯೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾರೆ.</p>.<p>‘ನಗರದಲ್ಲೇ ಉದ್ಯೋಗ ಮಾಡಿಕೊಂಡು ನೆಲಸಿದ್ದ ಎಂಟು ಮಂದಿ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ತಂಡವು ಕರ್ನೂಲ್ಗೆ ತೆರಳಿದೆ. ನಗರದಲ್ಲಿ ನೆಲಸಿದ್ದವರು ಇನ್ನೂ ಯಾರಾದರೂ ತೊಂದರೆಗೆ ಸಿಲುಕಿದ್ದಾರೆಯೇ ಎಂಬುದರ ಕುರಿತು ತಂಡವು ಪರಿಶೀಲನೆ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಆಂಧ್ರಪ್ರದೇಶದ ನೆಲ್ಲೂರಿನ ಗೊಳ್ಳ ರಮೇಶ್ (38) ಅವರ ಕುಟುಂಬವು ನಗರದ ಕಮ್ಮನಹಳ್ಳಿಯಲ್ಲಿ ನೆಲಸಿತ್ತು. ಪತ್ನಿ ಅನುಷಾ (35), ಮಕ್ಕಳಾದ ಶಶಾಂಕ್ (12) ಹಾಗೂ ಮಾನ್ವಿತಾ (10) ಜತೆಗೆ ಹಬ್ಬಕ್ಕೆ ಊರಿಗೆ ತೆರಳಿದ್ದರು. ಈ ಕುಟುಂಬವು ದುರಂತಕ್ಕೀಡಾದ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಪುಟ್ಟ ಮಕ್ಕಳು, ದಂಪತಿ ನಿದ್ರೆಯಲ್ಲಿ ಇದ್ದರು. ಹೊರಕ್ಕೆ ಬರಲು ಸಾಧ್ಯವಾಗದೇ ಇಡೀ ಕುಟುಂಬವೇ ಅಗ್ನಿಯಲ್ಲಿ ಬೆಂದು ಹೋಗಿದೆ.</p>.<p>ಇದೇ ಬಸ್ನಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ಗಳಾದ ಮೇಘನಾಥ್(24), ಅನುಷಾ ರೆಡ್ಡಿ(26), ಚಂದನಾ ಹಾಗೂ ಜಿ.ಧಾತ್ರಿ ಅವರೂ ದುರಂತ ಅಂತ್ಯ ಕಂಡಿದ್ದಾರೆ.</p>.<p>ಯಾದಾದ್ರಿಯ ನಿವಾಸಿ ಅನುಷಾ ರೆಡ್ಡಿ ಅವರು ಹೈದರಾಬಾದ್ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ, ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಅನುಷಾ ಅವರು ಅವಘಡದಲ್ಲಿ ಬೆಂದು ಹೋಗಿದ್ದಾರೆ. ಟೆಕಿ ವೇಣುಗೊಂಡ ಎಂಬುವವರು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.</p>.<p>‘ಕಣ್ಮುಂದೆಯೇ ಬಸ್ ಹೊತ್ತಿ ಉರಿಯುತ್ತಿದ್ದರೂ ಇತರೆ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಎಲ್–13 ಸಂಖ್ಯೆಯ ಸೀಟ್ನಲ್ಲಿದ್ದೆ. ತುರ್ತುನಿರ್ಗಮನ ದ್ವಾರ ತೆರೆದುಕೊಳ್ಳಲಿಲ್ಲ. ಬಳಿಕ, ಅದರ ಗಾಜು ಒಡೆದು 15 ಮಂದಿ ಹೊರಕ್ಕೆ ಬಂದೆವು. ಉಳಿದವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ’ ಎಂದು ವೇಣುಗೊಂಡ ತಿಳಿಸಿದ್ದಾರೆ.</p>.<p>‘ಅಗ್ನಿ ಅನಾಹುತಕ್ಕೀಡಾದ ಬಸ್, ದೇಶದಾದ್ಯಂತ ಸಂಚರಿಸುವ ಪರವಾನಗಿ ಹೊಂದಿತ್ತು. ಬೆಂಗಳೂರು ಸೇರಿ ಹೊರರಾಜ್ಯದ ಬೇರೆ ನಗರಕ್ಕೂ ಈ ಬಸ್ ತೆರಳುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ದೀಪಾವಳಿ ಹಬ್ಬದ ಕಾರಣಕ್ಕೆ ಈ ಬಸ್ ಬೆಂಗಳೂರಿಗೆ ಬರುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>