ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಡಿ.28ರಂದು ಪತ್ರ ಬರೆದಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯು, ಹೊಸದಾಗಿ ನೇಮಕಗೊಂಡ ಶಿಕ್ಷಕರ ದಾಖಲಾತಿ ಮರುಪರಿಶೀಲನೆಯು ಜನವರಿ 15ರಿಂದ ನಡೆಸಬೇಕು. ಅವರ ಬೆರಳಚ್ಚು ಸಂಗ್ರಹಿಸಿ, ಅದನ್ನು ಪ್ರವೇಶ ಪರೀಕ್ಷೆ ವೇಳೆ ಆಯೋಗ ಸಂಗ್ರಹಿಸಿದ ಬೆರಳಚ್ಚುನೊಂದಿಗೆ ಸರಿಹೊಂದಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ವೇಳೆ ಯಾವುದೇ ಅಸಮಂಜಸತೆ ಕಂಡುಬಂದರೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.