<p><strong>ನವದೆಹಲಿ</strong>: ಮಾಜಿ ಕೇಂದ್ರ ಸಚಿವರೊಬ್ಬರು ಬಿಹಾರದಲ್ಲಿ ವಿದ್ಯುತ್ ಖರೀದಿಗೆ ಸಂಬಂಧಿಸಿದ ಹಗರಣವನ್ನು ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.</p><p>ಬಿಹಾರದ ಸರ್ಕಾರಿ ವ್ಯವಸ್ಥೆಯು ರಿಮೋಟ್ ಕಂಟ್ರೋಲ್ ಆಗಿದೆ ಎಂದು ತಿಳಿದಿರುವ ಜನರು ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಎನ್ಡಿಎಯನ್ನು ತಿರಸ್ಕರಿಸುತ್ತಿದ್ದಾರೆ ಎಂದಿದ್ದಾರೆ. </p><p>ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅದಾನಿ ಗ್ರೂಪ್ ಬಿಹಾರದಲ್ಲಿ ರೆಡ್ ಕಾರ್ಪೆಟ್ ಟ್ರೀಟ್ಮೆಂಟ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲು ಮಾಡಲಾಗುವುದು, ಇದಕ್ಕೆ ಕಾರಣರಾದವವರನ್ನು ಶಿಕ್ಷಿಸಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p><p>ಅಕ್ರಮದ ಆರೋಪಗಳಿದ್ದರೂ ಸರ್ಕಾರ, ಬಿಜೆಪಿ ಅಥವಾ ಅದಾನಿ ಗ್ರೂಪ್ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದ್ದಾರೆ.</p><p>‘2017ರಿಂದ 2024ರವರೆಗೆ ಕೇಂದ್ರ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ್ದ ಆರ್.ಕೆ. ಸಿಂಗ್, ಪ್ರಧಾನಿ ಬಿಹಾರದಲ್ಲಿ ಅದಾನಿಗೆ ರೆಡ್ ಕಾರ್ಪೆಟ್ ಟ್ರೀಟ್ ನೀಡಿದ್ದರಿಂದ ನಡೆದಿರುವ ₹60,000 ಕೋಟಿ ಹಗರಣವನ್ನು ಈಗ ಬಯಲು ಮಾಡಿದ್ದಾರೆ. ಅದಾನಿ ಕಂಪನಿಯಿಂದ ಯೂನಿಟ್ಗೆ ₹6 ಅಧಿಕ ಬೆಲೆ ನೀಡಿ ವಿದ್ಯುತ್ ಖರೀದಿಸುವ ಬಿಹಾರ ಸರ್ಕಾರದ ಪ್ರಸ್ತಾಪವು ಬಡವರು ಮತ್ತು ಮಧ್ಯಮ ವರ್ಗದವರ ಸಂಪತ್ತನ್ನು ಮೋದಿಯ ಆಪ್ತ ಮಿತ್ರರ ಖಜಾನೆಗೆ ಸಂಪೂರ್ಣವಾಗಿ ಹರಿದು ಬರುವಂತೆ ಮಾಡುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ’ ಎಂದು ವೇಣುಗೋಪಾಲ್ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.</p><p>'ಈ ಚುನಾವಣೆಗಳಲ್ಲಿ ಬಿಹಾರದ ಜನರು ಎನ್ಡಿಎಯನ್ನು ತಿರಸ್ಕರಿಸುತ್ತಿದ್ದಾರೆ. ಏಕೆಂದರೆ, ಇಡೀ ವ್ಯವಸ್ಥೆಯು ಪ್ರಧಾನಿ ಕಚೇರಿ ಮೂಲಕ ರಿಮೋಟ್ ಕಂಟ್ರೋಲ್ ರೀತಿ ನಿರ್ವಹಿಸಲ್ಪಡುತ್ತಿದ್ದು, ಅದಾನಿ ಮತ್ತು ಅಂತಹವರಿಗೆ ಲೂಟಿ ಯಂತ್ರವಾಗಿದೆ. ಈ ಭ್ರಷ್ಟಾಚಾರವನ್ನು ಬಹಿರಂಗಪಡಿಸಲಾಗುತ್ತದೆ ಮತ್ತು ಇದರಲ್ಲಿ ಭಾಗಿಯಾಗಿರುವವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ’ಎಂದು ಗುಡುಗಿದ್ದಾರೆ.</p><p>ಬಿಹಾರ ವಿಧಾನಸಭೆಗೆ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಾಜಿ ಕೇಂದ್ರ ಸಚಿವರೊಬ್ಬರು ಬಿಹಾರದಲ್ಲಿ ವಿದ್ಯುತ್ ಖರೀದಿಗೆ ಸಂಬಂಧಿಸಿದ ಹಗರಣವನ್ನು ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.</p><p>ಬಿಹಾರದ ಸರ್ಕಾರಿ ವ್ಯವಸ್ಥೆಯು ರಿಮೋಟ್ ಕಂಟ್ರೋಲ್ ಆಗಿದೆ ಎಂದು ತಿಳಿದಿರುವ ಜನರು ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಎನ್ಡಿಎಯನ್ನು ತಿರಸ್ಕರಿಸುತ್ತಿದ್ದಾರೆ ಎಂದಿದ್ದಾರೆ. </p><p>ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅದಾನಿ ಗ್ರೂಪ್ ಬಿಹಾರದಲ್ಲಿ ರೆಡ್ ಕಾರ್ಪೆಟ್ ಟ್ರೀಟ್ಮೆಂಟ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲು ಮಾಡಲಾಗುವುದು, ಇದಕ್ಕೆ ಕಾರಣರಾದವವರನ್ನು ಶಿಕ್ಷಿಸಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p><p>ಅಕ್ರಮದ ಆರೋಪಗಳಿದ್ದರೂ ಸರ್ಕಾರ, ಬಿಜೆಪಿ ಅಥವಾ ಅದಾನಿ ಗ್ರೂಪ್ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದ್ದಾರೆ.</p><p>‘2017ರಿಂದ 2024ರವರೆಗೆ ಕೇಂದ್ರ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ್ದ ಆರ್.ಕೆ. ಸಿಂಗ್, ಪ್ರಧಾನಿ ಬಿಹಾರದಲ್ಲಿ ಅದಾನಿಗೆ ರೆಡ್ ಕಾರ್ಪೆಟ್ ಟ್ರೀಟ್ ನೀಡಿದ್ದರಿಂದ ನಡೆದಿರುವ ₹60,000 ಕೋಟಿ ಹಗರಣವನ್ನು ಈಗ ಬಯಲು ಮಾಡಿದ್ದಾರೆ. ಅದಾನಿ ಕಂಪನಿಯಿಂದ ಯೂನಿಟ್ಗೆ ₹6 ಅಧಿಕ ಬೆಲೆ ನೀಡಿ ವಿದ್ಯುತ್ ಖರೀದಿಸುವ ಬಿಹಾರ ಸರ್ಕಾರದ ಪ್ರಸ್ತಾಪವು ಬಡವರು ಮತ್ತು ಮಧ್ಯಮ ವರ್ಗದವರ ಸಂಪತ್ತನ್ನು ಮೋದಿಯ ಆಪ್ತ ಮಿತ್ರರ ಖಜಾನೆಗೆ ಸಂಪೂರ್ಣವಾಗಿ ಹರಿದು ಬರುವಂತೆ ಮಾಡುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ’ ಎಂದು ವೇಣುಗೋಪಾಲ್ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.</p><p>'ಈ ಚುನಾವಣೆಗಳಲ್ಲಿ ಬಿಹಾರದ ಜನರು ಎನ್ಡಿಎಯನ್ನು ತಿರಸ್ಕರಿಸುತ್ತಿದ್ದಾರೆ. ಏಕೆಂದರೆ, ಇಡೀ ವ್ಯವಸ್ಥೆಯು ಪ್ರಧಾನಿ ಕಚೇರಿ ಮೂಲಕ ರಿಮೋಟ್ ಕಂಟ್ರೋಲ್ ರೀತಿ ನಿರ್ವಹಿಸಲ್ಪಡುತ್ತಿದ್ದು, ಅದಾನಿ ಮತ್ತು ಅಂತಹವರಿಗೆ ಲೂಟಿ ಯಂತ್ರವಾಗಿದೆ. ಈ ಭ್ರಷ್ಟಾಚಾರವನ್ನು ಬಹಿರಂಗಪಡಿಸಲಾಗುತ್ತದೆ ಮತ್ತು ಇದರಲ್ಲಿ ಭಾಗಿಯಾಗಿರುವವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ’ಎಂದು ಗುಡುಗಿದ್ದಾರೆ.</p><p>ಬಿಹಾರ ವಿಧಾನಸಭೆಗೆ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>