<p><strong>ನವದೆಹಲಿ</strong>: ಬಿಹಾರ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ಕಾಂಗ್ರೆಸ್ ಪಕ್ಷ, ತನ್ನ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ನಲ್ಲಿ ‘ಮತ ಅಧಿಕಾರ ಯಾತ್ರೆ’ ಕೈಗೊಂಡಿತ್ತು. ಈ ಯಾತ್ರೆ ಸಾಗಿದ ಮಾರ್ಗದ ಪ್ರದೇಶಗಳಲ್ಲಿನ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.</p>.<p>ಮತಗಳ ಕ್ರೋಡೀಕರಣ ಉದ್ದೇಶದಿಂದ ಕೈಗೊಂಡಿದ್ದ ಈ ಯಾತ್ರೆಯು ಸಾಸಾರಾಮ್ದಿಂದ ಶುರುವಾಗಿ ಪಟ್ನಾದಲ್ಲಿ ಕೊನೆಯಾಗಿತ್ತು. 1,300 ಕಿ.ಮೀ. ಕ್ರಮಿಸಿದ್ದ ಈ ಯಾತ್ರೆಯು 25 ಜಿಲ್ಲೆಗಳ ಮೂಲಕ ಸಾಗಿತ್ತು. ಈ ಮಾರ್ಗದಲ್ಲಿ 120 ವಿಧಾನಸಭಾ ಕ್ಷೇತ್ರಗಳಿವೆ. ಅರರಿಯಾ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈ ಮಾರ್ಗದಲ್ಲಿನ ಕ್ಷೇತ್ರಗಳಲ್ಲಿ ಎನ್ಡಿಎದ ಶೇ90ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.</p>.<p>ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಆರು ಕ್ಷೇತ್ರಗಳಲ್ಲಿ ಗೆದ್ದಿದೆ.</p>.<p>ಬಿಜೆಪಿಯು ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರನ್ನು ಕಿಚಾಯಿಸಿ ಹಾಗೂ ಟೀಕಿಸುವಂತಹ ಪೋಸ್ಟ್ಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಕಿದೆ.</p>.<p>‘ಮಕ್ಕಳ ದಿನಾಚರಣೆ ವೇಳೆ ‘ರಾಷ್ಟ್ರೀಯ ಮಗು’ ಅಸಮಾಧಾನಗೊಳ್ಳುವಂತೆ ಮಾಡಿದ್ದಕ್ಕಾಗಿ ಕ್ಷಮೆ ಇರಲಿ. ನಿಜಕ್ಕೂ ಇದು ದುರದೃಷ್ಟಕರ’ ಎಂಬ ಪೋಸ್ಟ್ ಹಾಕುವ ಮೂಲಕ ಬಿಜೆಪಿಯ ಅಸ್ಸಾಂ ಘಟಕವು ರಾಹುಲ್ ಗಾಂಧಿ ಅವರನ್ನು ಕುಟುಕಿದೆ. </p>.<p>‘ಮುಂದಿನ ಸರದಿ ಪಶ್ಚಿಮ ಬಂಗಾಳ’ ಎಂಬುದಾಗಿ ಬಿಜೆಪಿಯ ಪಶ್ಷಿಮ ಬಂಗಾಳ ಘಟಕವು ‘ಎಕ್ಸ್’ನಲ್ಲಿ ಬರೆದುಕೊಂಡಿದೆ. ಟಿಎಂಸಿ ಇದಕ್ಕೆ ತಿರುಗೇಟು ನೀಡಿ, ಪೋಸ್ಟ್ ಮಾಡಿದೆ.</p>.<div><blockquote>95 ಚುನಾವಣೆಗಳಲ್ಲಿ ಸೋಲನುಭವಿಸಿರುವ ರಾಹುಲ್ ಗಾಂಧಿ ಅವರಿಗೆ ಭವಿಷ್ಯದಲ್ಲಿಯೂ ಸೋಲು ನಿಶ್ಚಿತ. ಪರಾಭವಗೊಂಡಾಗಲೆಲ್ಲಾ ಅವರು ಹೊಸ ಆರೋಪಗಳೊಂದಿಗೆ ಸಿದ್ಧರಾಗಿರುತ್ತಾರೆ. ಅವರ ಆರೋಪಗಳೆಲ್ಲಾ ಸುಳ್ಳು ಎಂಬುದು ದೇಶಕ್ಕೆ ಅರಿವಾಗಿದೆ</blockquote><span class="attribution">ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಹಾರ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ಕಾಂಗ್ರೆಸ್ ಪಕ್ಷ, ತನ್ನ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ನಲ್ಲಿ ‘ಮತ ಅಧಿಕಾರ ಯಾತ್ರೆ’ ಕೈಗೊಂಡಿತ್ತು. ಈ ಯಾತ್ರೆ ಸಾಗಿದ ಮಾರ್ಗದ ಪ್ರದೇಶಗಳಲ್ಲಿನ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.</p>.<p>ಮತಗಳ ಕ್ರೋಡೀಕರಣ ಉದ್ದೇಶದಿಂದ ಕೈಗೊಂಡಿದ್ದ ಈ ಯಾತ್ರೆಯು ಸಾಸಾರಾಮ್ದಿಂದ ಶುರುವಾಗಿ ಪಟ್ನಾದಲ್ಲಿ ಕೊನೆಯಾಗಿತ್ತು. 1,300 ಕಿ.ಮೀ. ಕ್ರಮಿಸಿದ್ದ ಈ ಯಾತ್ರೆಯು 25 ಜಿಲ್ಲೆಗಳ ಮೂಲಕ ಸಾಗಿತ್ತು. ಈ ಮಾರ್ಗದಲ್ಲಿ 120 ವಿಧಾನಸಭಾ ಕ್ಷೇತ್ರಗಳಿವೆ. ಅರರಿಯಾ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈ ಮಾರ್ಗದಲ್ಲಿನ ಕ್ಷೇತ್ರಗಳಲ್ಲಿ ಎನ್ಡಿಎದ ಶೇ90ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.</p>.<p>ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಆರು ಕ್ಷೇತ್ರಗಳಲ್ಲಿ ಗೆದ್ದಿದೆ.</p>.<p>ಬಿಜೆಪಿಯು ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರನ್ನು ಕಿಚಾಯಿಸಿ ಹಾಗೂ ಟೀಕಿಸುವಂತಹ ಪೋಸ್ಟ್ಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಕಿದೆ.</p>.<p>‘ಮಕ್ಕಳ ದಿನಾಚರಣೆ ವೇಳೆ ‘ರಾಷ್ಟ್ರೀಯ ಮಗು’ ಅಸಮಾಧಾನಗೊಳ್ಳುವಂತೆ ಮಾಡಿದ್ದಕ್ಕಾಗಿ ಕ್ಷಮೆ ಇರಲಿ. ನಿಜಕ್ಕೂ ಇದು ದುರದೃಷ್ಟಕರ’ ಎಂಬ ಪೋಸ್ಟ್ ಹಾಕುವ ಮೂಲಕ ಬಿಜೆಪಿಯ ಅಸ್ಸಾಂ ಘಟಕವು ರಾಹುಲ್ ಗಾಂಧಿ ಅವರನ್ನು ಕುಟುಕಿದೆ. </p>.<p>‘ಮುಂದಿನ ಸರದಿ ಪಶ್ಚಿಮ ಬಂಗಾಳ’ ಎಂಬುದಾಗಿ ಬಿಜೆಪಿಯ ಪಶ್ಷಿಮ ಬಂಗಾಳ ಘಟಕವು ‘ಎಕ್ಸ್’ನಲ್ಲಿ ಬರೆದುಕೊಂಡಿದೆ. ಟಿಎಂಸಿ ಇದಕ್ಕೆ ತಿರುಗೇಟು ನೀಡಿ, ಪೋಸ್ಟ್ ಮಾಡಿದೆ.</p>.<div><blockquote>95 ಚುನಾವಣೆಗಳಲ್ಲಿ ಸೋಲನುಭವಿಸಿರುವ ರಾಹುಲ್ ಗಾಂಧಿ ಅವರಿಗೆ ಭವಿಷ್ಯದಲ್ಲಿಯೂ ಸೋಲು ನಿಶ್ಚಿತ. ಪರಾಭವಗೊಂಡಾಗಲೆಲ್ಲಾ ಅವರು ಹೊಸ ಆರೋಪಗಳೊಂದಿಗೆ ಸಿದ್ಧರಾಗಿರುತ್ತಾರೆ. ಅವರ ಆರೋಪಗಳೆಲ್ಲಾ ಸುಳ್ಳು ಎಂಬುದು ದೇಶಕ್ಕೆ ಅರಿವಾಗಿದೆ</blockquote><span class="attribution">ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>