<p><strong>ಪಟ್ನಾ</strong>: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಬಿಹಾರದ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದು, ವಿರೋಧ ಪಕ್ಷದ ನಾಯಕ, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆಯಿತು.</p>.<p>ಕಲಾಪ ಆರಂಭವಾಗುತ್ತಿದ್ದಂತೆ ಈ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆಯೂ ವಾಗ್ವಾದ ಮುಂದುವರಿಯಿತು. ಮಂಗಳವಾರದ ಕಲಾಪದ ವೇಳೆಯೂ ಈ ವಿಚಾರವಾಗಿ ಗದ್ದಲ ನಡೆದು, ಕೆಲ ದುರುದೃಷ್ಟಕರ ಘಟನೆಗಳು ನಡೆದಿದ್ದವು. ಆಗ ಸದನದ ಕೆಲ ಸಿಬ್ಬಂದಿ ಗಾಯಗೊಂಡಿದ್ದರು. ಅದು ಬುಧವಾರ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ಸ್ಪೀಕರ್ ನಂದ ಕಿಶೋರ್ ಯಾದವ್ ಆರಂಭದಲ್ಲಿ ಹೇಳಿದರು.</p>.<p>ಇದರ ನಡುವೆಯೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಅಸಂಸದೀಯ ಪದಗಳು ವಿಲೇವಾರಿಯಾದವು. ಕೊನೆಗೆ ಸ್ಪೀಕರ್ ನಂದ ಕಿಶೋರ್ ಯಾದವ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.</p>.<p>‘ಎಸ್ಐಆರ್ ಅನ್ನು ನಾವು ವಿರೋಧಿಸುವುದಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿರುವಾಗ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಏಕೆ ನಡೆಸುತ್ತಿದೆ ಎಂಬುದು ಪ್ರಮುಖ ಆಕ್ಷೇಪವಾಗಿದೆ’ ಎಂದು ಆರ್ಜೆಡಿ ನಾಯಕ ತೇಜಸ್ವಿ ತಿಳಿಸಿದರು.</p>.<p>‘ಆಯೋಗ ಕೇಳುತ್ತಿರುವ ದಾಖಲೆಗಳು ಕೇವಲ ಶೇ 3ರಷ್ಟು ಮತದಾರರ ಬಳಿ ಇರಬಹುದು. ನಕಲಿ ಮತದಾರರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆ ಸ್ಥಾನದಲ್ಲಿದ್ದಾರೆಯೇ? ಅದನ್ನು ಹೇಳುವುದೇ ಚುನಾವಣಾ ಆಯೋಗದ ಉದ್ದೇಶವೇ?’ ಎಂದು ಅವರು ಪ್ರಶ್ನಿಸಿದರು. </p>.<p>‘ರಾಜ್ಯದ ಸುಮಾರು 4.5 ಕೋಟಿ ನಿವಾಸಿಗಳು ಹೊರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರು ಚುನಾವಣೆ ವೇಳೆ ರಾಜ್ಯಕ್ಕೆ ಮರಳುತ್ತಾರೆ. ಈ ಮತದಾರರ ಭವಿಷ್ಯ ಏನಾಗಬಹುದು’ ಎಂದು ಅವರು ಕೇಳಿದರು. </p>.<p>ಆಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನೀವಿನ್ನೂ ಚಿಕ್ಕವರಿದ್ದೀರಿ, ಇವುಗಳ ಬಗ್ಗೆ ನಿಮಗೆ ಅಷ್ಟಾಗಿ ಗೊತ್ತಿಲ್ಲ. ನೀವು ಏನೆಲ್ಲ ಕೆಟ್ಟದು ಹೇಳಬೇಕು ಎಂದುಕೊಂಡಿದ್ದೀರೊ ಅದನ್ನೆಲ್ಲ ಚುನಾವಣೆಯಲ್ಲಿ ಮಾಡಿ’ ಎಂದರು.</p>.<p>‘ನಿಮ್ಮ ಪೋಷಕರು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ರಾಜ್ಯದ ಮಹಿಳೆಯರಿಗಾಗಲಿ, ಮುಸ್ಲಿಮರಿಗಾಗಲಿ ಅಥವಾ ಸಮಾಜದ ಇತರರಿಗಾಗಲಿ ಏನನ್ನೂ ಮಾಡಲಿಲ್ಲ. ಅವರ ಅವಧಿಯಲ್ಲಿ ಯಾರಿಗಾದರೂ ಅನುಕೂಲವಾಗಿದೆ ಎಂದರೆ, ಅದು ನಿಮ್ಮ ತಾಯಿಗೆ ಮಾತ್ರ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಬಿಹಾರದ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದು, ವಿರೋಧ ಪಕ್ಷದ ನಾಯಕ, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆಯಿತು.</p>.<p>ಕಲಾಪ ಆರಂಭವಾಗುತ್ತಿದ್ದಂತೆ ಈ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆಯೂ ವಾಗ್ವಾದ ಮುಂದುವರಿಯಿತು. ಮಂಗಳವಾರದ ಕಲಾಪದ ವೇಳೆಯೂ ಈ ವಿಚಾರವಾಗಿ ಗದ್ದಲ ನಡೆದು, ಕೆಲ ದುರುದೃಷ್ಟಕರ ಘಟನೆಗಳು ನಡೆದಿದ್ದವು. ಆಗ ಸದನದ ಕೆಲ ಸಿಬ್ಬಂದಿ ಗಾಯಗೊಂಡಿದ್ದರು. ಅದು ಬುಧವಾರ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ಸ್ಪೀಕರ್ ನಂದ ಕಿಶೋರ್ ಯಾದವ್ ಆರಂಭದಲ್ಲಿ ಹೇಳಿದರು.</p>.<p>ಇದರ ನಡುವೆಯೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಅಸಂಸದೀಯ ಪದಗಳು ವಿಲೇವಾರಿಯಾದವು. ಕೊನೆಗೆ ಸ್ಪೀಕರ್ ನಂದ ಕಿಶೋರ್ ಯಾದವ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.</p>.<p>‘ಎಸ್ಐಆರ್ ಅನ್ನು ನಾವು ವಿರೋಧಿಸುವುದಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿರುವಾಗ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಏಕೆ ನಡೆಸುತ್ತಿದೆ ಎಂಬುದು ಪ್ರಮುಖ ಆಕ್ಷೇಪವಾಗಿದೆ’ ಎಂದು ಆರ್ಜೆಡಿ ನಾಯಕ ತೇಜಸ್ವಿ ತಿಳಿಸಿದರು.</p>.<p>‘ಆಯೋಗ ಕೇಳುತ್ತಿರುವ ದಾಖಲೆಗಳು ಕೇವಲ ಶೇ 3ರಷ್ಟು ಮತದಾರರ ಬಳಿ ಇರಬಹುದು. ನಕಲಿ ಮತದಾರರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆ ಸ್ಥಾನದಲ್ಲಿದ್ದಾರೆಯೇ? ಅದನ್ನು ಹೇಳುವುದೇ ಚುನಾವಣಾ ಆಯೋಗದ ಉದ್ದೇಶವೇ?’ ಎಂದು ಅವರು ಪ್ರಶ್ನಿಸಿದರು. </p>.<p>‘ರಾಜ್ಯದ ಸುಮಾರು 4.5 ಕೋಟಿ ನಿವಾಸಿಗಳು ಹೊರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರು ಚುನಾವಣೆ ವೇಳೆ ರಾಜ್ಯಕ್ಕೆ ಮರಳುತ್ತಾರೆ. ಈ ಮತದಾರರ ಭವಿಷ್ಯ ಏನಾಗಬಹುದು’ ಎಂದು ಅವರು ಕೇಳಿದರು. </p>.<p>ಆಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನೀವಿನ್ನೂ ಚಿಕ್ಕವರಿದ್ದೀರಿ, ಇವುಗಳ ಬಗ್ಗೆ ನಿಮಗೆ ಅಷ್ಟಾಗಿ ಗೊತ್ತಿಲ್ಲ. ನೀವು ಏನೆಲ್ಲ ಕೆಟ್ಟದು ಹೇಳಬೇಕು ಎಂದುಕೊಂಡಿದ್ದೀರೊ ಅದನ್ನೆಲ್ಲ ಚುನಾವಣೆಯಲ್ಲಿ ಮಾಡಿ’ ಎಂದರು.</p>.<p>‘ನಿಮ್ಮ ಪೋಷಕರು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ರಾಜ್ಯದ ಮಹಿಳೆಯರಿಗಾಗಲಿ, ಮುಸ್ಲಿಮರಿಗಾಗಲಿ ಅಥವಾ ಸಮಾಜದ ಇತರರಿಗಾಗಲಿ ಏನನ್ನೂ ಮಾಡಲಿಲ್ಲ. ಅವರ ಅವಧಿಯಲ್ಲಿ ಯಾರಿಗಾದರೂ ಅನುಕೂಲವಾಗಿದೆ ಎಂದರೆ, ಅದು ನಿಮ್ಮ ತಾಯಿಗೆ ಮಾತ್ರ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>