<p><strong>ಚಂಡೀಗಢ:</strong> ಹರಿಯಾಣ ವಿಧಾನಸಭೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಂಡಿರುವುದಕ್ಕೆ ಬಿಷ್ಣೋಯಿ ಸಮುದಾಯ ಆಯೋಗಕ್ಕೆ ಧನ್ಯವಾದ ತಿಳಿಸಿದೆ.</p><p>ಆಡಳಿತಾರೂಢ ಬಿಜೆಪಿ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿದೆ.</p><p>ಅಖಿಲ ಭಾರತೀಯ ಬಿಷ್ಣೋಯಿ ಮಹಾಸಭಾದ ಉಪಾಧ್ಯಕ್ಷ ಸೋಮ್ ಪ್ರಕಾಶ್ ಬಿಷ್ಣೋಯಿ ಮಾತನಾಡಿ, ಚುನಾವಣಾ ದಿನಾಂಕವನ್ನು ಮುಂದೂಡಿರುವ ಆಯೋಗಕ್ಕೆ ನಮ್ಮ ಸಮುದಾಯ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದ್ದಾರೆ.</p><p>ಸಮುದಾಯದ ಲಕ್ಷಾಂತರ ಜನರು ಬಿಷ್ಣೋಯಿ ಉತ್ಸವದಲ್ಲಿ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಚುನಾವಣೆ ನಡೆದರೆ ಮತದಾನದಿಂದ ಅವರು ವಂಚಿತರಾಗುತ್ತಿದ್ದರು ಎಂದು ಹೇಳಿದ್ದಾರೆ. </p><p>ಈ ಹಿಂದೆ ಅ. 1ರಂದು ಮತದಾನ ನಿಗದಿಯಾಗಿತ್ತು. ಬಿಷ್ಣೋಯಿ ಸಮುದಾಯದವರ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಶನಿವಾರ ತಿಳಿಸಿತ್ತು.</p><p>ಮತದಾನ ದಿನಾಂಕ ಮುಂದೂಡಿಕೆಯಾಗಿರುವ ಕಾರಣ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಯ ಮತ ಎಣಿಕೆಯನ್ನು ಅ.4ರ ಬದಲಾಗಿ, ಅ.8ಕ್ಕೆ ಮುಂದೂಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.</p><p>ಗುರು ಜಂಭೇಶ್ವರ ಸ್ಮರಣಾರ್ಥ ಸುಮಾರು 400 ವರ್ಷಗಳಿಂದ ಬಿಷ್ಣೋಯಿ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಹಬ್ಬ ಅಥವಾ ಉತ್ಸವ ಇದಾಗಿದೆ. </p><p>ಗುರು ಜಂಭೇಶ್ವರ ಅವರ ಸ್ವಗ್ರಾಮವಾದ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ‘ಮುಕಾಮ್’ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಆ.2ರಂದು ಈ ಸಲ ಹಬ್ಬ ನಡೆಯಲಿದ್ದು, ಹರಿಯಾಣದ ವಿವಿಧೆಡೆಯಿಂದ ಅಲ್ಲಿಗೆ ತೆರಳಲು ಜನರು ಮುಂಚಿತವಾಗಿ ತೆರಳುತ್ತಾರೆ. ಇದರಿಂದ ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ’ ಎಂದು ಬಿಷ್ಣೋಯಿ ಮಹಾಸಭಾ ಆಯೋಗಕ್ಕೆ ಮನವಿಯಲ್ಲಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ಹರಿಯಾಣ ವಿಧಾನಸಭೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಂಡಿರುವುದಕ್ಕೆ ಬಿಷ್ಣೋಯಿ ಸಮುದಾಯ ಆಯೋಗಕ್ಕೆ ಧನ್ಯವಾದ ತಿಳಿಸಿದೆ.</p><p>ಆಡಳಿತಾರೂಢ ಬಿಜೆಪಿ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿದೆ.</p><p>ಅಖಿಲ ಭಾರತೀಯ ಬಿಷ್ಣೋಯಿ ಮಹಾಸಭಾದ ಉಪಾಧ್ಯಕ್ಷ ಸೋಮ್ ಪ್ರಕಾಶ್ ಬಿಷ್ಣೋಯಿ ಮಾತನಾಡಿ, ಚುನಾವಣಾ ದಿನಾಂಕವನ್ನು ಮುಂದೂಡಿರುವ ಆಯೋಗಕ್ಕೆ ನಮ್ಮ ಸಮುದಾಯ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದ್ದಾರೆ.</p><p>ಸಮುದಾಯದ ಲಕ್ಷಾಂತರ ಜನರು ಬಿಷ್ಣೋಯಿ ಉತ್ಸವದಲ್ಲಿ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಚುನಾವಣೆ ನಡೆದರೆ ಮತದಾನದಿಂದ ಅವರು ವಂಚಿತರಾಗುತ್ತಿದ್ದರು ಎಂದು ಹೇಳಿದ್ದಾರೆ. </p><p>ಈ ಹಿಂದೆ ಅ. 1ರಂದು ಮತದಾನ ನಿಗದಿಯಾಗಿತ್ತು. ಬಿಷ್ಣೋಯಿ ಸಮುದಾಯದವರ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಶನಿವಾರ ತಿಳಿಸಿತ್ತು.</p><p>ಮತದಾನ ದಿನಾಂಕ ಮುಂದೂಡಿಕೆಯಾಗಿರುವ ಕಾರಣ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಯ ಮತ ಎಣಿಕೆಯನ್ನು ಅ.4ರ ಬದಲಾಗಿ, ಅ.8ಕ್ಕೆ ಮುಂದೂಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.</p><p>ಗುರು ಜಂಭೇಶ್ವರ ಸ್ಮರಣಾರ್ಥ ಸುಮಾರು 400 ವರ್ಷಗಳಿಂದ ಬಿಷ್ಣೋಯಿ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಹಬ್ಬ ಅಥವಾ ಉತ್ಸವ ಇದಾಗಿದೆ. </p><p>ಗುರು ಜಂಭೇಶ್ವರ ಅವರ ಸ್ವಗ್ರಾಮವಾದ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ‘ಮುಕಾಮ್’ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಆ.2ರಂದು ಈ ಸಲ ಹಬ್ಬ ನಡೆಯಲಿದ್ದು, ಹರಿಯಾಣದ ವಿವಿಧೆಡೆಯಿಂದ ಅಲ್ಲಿಗೆ ತೆರಳಲು ಜನರು ಮುಂಚಿತವಾಗಿ ತೆರಳುತ್ತಾರೆ. ಇದರಿಂದ ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ’ ಎಂದು ಬಿಷ್ಣೋಯಿ ಮಹಾಸಭಾ ಆಯೋಗಕ್ಕೆ ಮನವಿಯಲ್ಲಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>