ಅಹಮದಾಬಾದ್: ರಾಜ್ಯದಲ್ಲಿ ಆಡಳಿತ ನಡೆಸಲು ನಮಗೊಂದು ಅವಕಾಶ ನೀಡಿ ಎಂದು ಗುಜರಾತ್ ಜನತೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಅಹಮದಾಬಾದ್ನಲ್ಲಿ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಆಮ್ ಆದ್ಮಿ ಪಕ್ಷ ಆಯೋಜಿಸಿದ ರೋಡ್ ಶೋದಲ್ಲಿ ಭಾಗವಹಿಸಿದರು.
'ರಾಜ್ಯದಲ್ಲಿ 25 ವರ್ಷಗಳ ಕಾಲ ಅಧಿಕಾರದಲ್ಲಿರುವ ಬಿಜೆಪಿಯು ದುರಹಂಕಾರದಿಂದ ಕೂಡಿದ್ದು, ಜನ ಸಾಮಾನ್ಯರು ನಮ್ಮ ಪಕ್ಷಕ್ಕೆ ಅವಕಾಶ ನೀಡಬೇಕು' ಎಂದು 'ತಿರಂಗ ಗೌರವ ಯಾತ್ರೆ' ಉದ್ಘಾಟಿಸಿ ಕೇಜ್ರಿವಾಲ್ ಹೇಳಿದರು.
ಇದಕ್ಕೂ ಮೊದಲು ಇಬ್ಬರು ನಾಯಕರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಇತ್ತೀಚೆಗಷ್ಟೇ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿತ್ತು. ಈಗ ಗುಜರಾತ್ ಚುನಾವಣೆಯತ್ತ ಚಿತ್ತ ಹಾಯಿಸಿದೆ.