‘ರಾಮ ಇಂದಿಗೂ ಇದ್ದಾನೆ. ಸದಾ ಕಾಲ ಇರುತ್ತಾನೆ. ನಾವು ಇಲ್ಲದಿದ್ದಾಗಲೂ ಇದ್ದ. ಮುಂದಿನ ದಿನಗಳಲ್ಲಿ ನಾವಿಲ್ಲದಿರುವಾಗಲೂ ರಾಮನಿರುತ್ತಾನೆ. ಆದರೆ ನೀವು, ರಾಮನನ್ನು ನಾವು ಕರೆ ತಂದಿದ್ದೇವೆ ಎಂದು ಹೇಳುವ ಮೂಲಕ ರಾಮನಿಗಷ್ಟೇ ಅಲ್ಲದೇ ಧರ್ಮವನ್ನೂ ಅವಮಾನಿಸುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದ ಅವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಕೈಬಿಡಿ ಎಂದು ಬಿಜೆಪಿ ಮುಖಂಡರಿಗೆ ಆಗ್ರಹಿಸಿದರು.