<p><strong>ಕೋಲ್ಕತ್ತ:</strong> ಬಾಲಿವುಡ್ ಬಾದ್ಶಾ ಖ್ಯಾತಿಯ ಶಾರೂಕ್ ಖಾನ್ ದೇಶದ್ರೋಹಿ ಆಗಿದ್ದು, ಅವರಿಗೆ ದೇಶದಲ್ಲಿ ನೆಲೆಸುವ ಹಕ್ಕು ಇಲ್ಲ ಎಂದು ಬಿಜೆಪಿಯ ನಾಯಕ ಸಂಗೀತ್ ಸೋಮ್ ಆರೋಪಿಸಿದ್ದಾರೆ. </p><p>ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶಾರೂಕ್ ಅವರ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ಅವರಿಗೆ ಆಡಲು ಅವಕಾಶ ನೀಡಿರುವುದು ಬಿಜೆಪಿ ನಾಯಕನ ಕೋಪಕ್ಕೆ ಕಾರಣವಾಗಿದೆ. </p>.ಬಾಂಗ್ಲಾದೇಶ ಹೈ ಕಮಿಷನ್ ಕಚೇರಿ ಮುಂದೆ ಸಂಘರ್ಷ.ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ. <p>ಮುಸ್ತಫಿಜುರ್ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. </p><p>ಬಾಂಗ್ಲಾದೇಶದಲ್ಲಿ ನಮ್ಮ ಸೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಆದರೂ ಶಾರೂಕ್, ಬಾಂಗ್ಲಾ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿದ್ದಾರೆ. ದೇಶದ ಜನರಿಂದಾಗಿಯೇ ಸ್ಟಾರ್ ಆಗಿದ್ದಾರೆ ಎಂಬುದನ್ನು ಶಾರೂಕ್ ಅವರಂತಹ ದೇಶದ್ರೋಹಿಗಳು ಮರೆಯಬಾರದು ಎಂದಿದ್ದಾರೆ. </p><p>ಬಾಂಗ್ಲಾದೇಶದ ಆಟಗಾರರಿಗೆ ಭಾರತದಲ್ಲಿ ಆಡಲು ಅವಕಾಶ ನೀಡಲಾಗುವುದಿಲ್ಲ. ಶಾರೂಕ್ ಖಾನ್ಗೆ ದೇಶದಲ್ಲಿ ವಾಸಿಸುವ ಹಕ್ಕು ಇಲ್ಲ. ದೇಶ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಬಾಲಿವುಡ್ ಬಾದ್ಶಾ ಖ್ಯಾತಿಯ ಶಾರೂಕ್ ಖಾನ್ ದೇಶದ್ರೋಹಿ ಆಗಿದ್ದು, ಅವರಿಗೆ ದೇಶದಲ್ಲಿ ನೆಲೆಸುವ ಹಕ್ಕು ಇಲ್ಲ ಎಂದು ಬಿಜೆಪಿಯ ನಾಯಕ ಸಂಗೀತ್ ಸೋಮ್ ಆರೋಪಿಸಿದ್ದಾರೆ. </p><p>ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶಾರೂಕ್ ಅವರ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ಅವರಿಗೆ ಆಡಲು ಅವಕಾಶ ನೀಡಿರುವುದು ಬಿಜೆಪಿ ನಾಯಕನ ಕೋಪಕ್ಕೆ ಕಾರಣವಾಗಿದೆ. </p>.ಬಾಂಗ್ಲಾದೇಶ ಹೈ ಕಮಿಷನ್ ಕಚೇರಿ ಮುಂದೆ ಸಂಘರ್ಷ.ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ. <p>ಮುಸ್ತಫಿಜುರ್ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. </p><p>ಬಾಂಗ್ಲಾದೇಶದಲ್ಲಿ ನಮ್ಮ ಸೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಆದರೂ ಶಾರೂಕ್, ಬಾಂಗ್ಲಾ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿದ್ದಾರೆ. ದೇಶದ ಜನರಿಂದಾಗಿಯೇ ಸ್ಟಾರ್ ಆಗಿದ್ದಾರೆ ಎಂಬುದನ್ನು ಶಾರೂಕ್ ಅವರಂತಹ ದೇಶದ್ರೋಹಿಗಳು ಮರೆಯಬಾರದು ಎಂದಿದ್ದಾರೆ. </p><p>ಬಾಂಗ್ಲಾದೇಶದ ಆಟಗಾರರಿಗೆ ಭಾರತದಲ್ಲಿ ಆಡಲು ಅವಕಾಶ ನೀಡಲಾಗುವುದಿಲ್ಲ. ಶಾರೂಕ್ ಖಾನ್ಗೆ ದೇಶದಲ್ಲಿ ವಾಸಿಸುವ ಹಕ್ಕು ಇಲ್ಲ. ದೇಶ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>