<p class="title"><strong>ಕೋಲ್ಕತ್ತ:</strong> ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಬಿಧನ್ ನಗರ ಪಾಲಿಕೆಯ (ಬಿಎಂಸಿ) ಮಾಜಿ ಮೇಯರ್ ಸವ್ಯಸಾಚಿ ದತ್ತ ಗುರುವಾರ ಮತ್ತೆ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ.</p>.<p class="title">ಸವ್ಯಸಾಚಿ ಅವರು ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಲು ಟಿಎಂಸಿ ಪಕ್ಷವನ್ನು ತೊರೆದಿದ್ದರು.</p>.<p class="bodytext">ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿಯೋ ಅಲ್ಲೆಲ್ಲ ತಾಲಿಬಾನ್ ಮಾದರಿ ಸರ್ಕಾರ ನಡೆಸುತ್ತಿದೆ ಎಂದು ಸವ್ಯಸಾಚಿ ದತ್ತ ಆರೋಪಿಸಿದ್ದಾರೆ.</p>.<p class="bodytext">ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಪುಟ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ಕಚೇರಿಯಲ್ಲಿ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸವ್ಯಸಾಚಿ ಅವರನ್ನು ಸ್ವಾಗತಿಸಿದರು.</p>.<p class="bodytext">‘ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಸವ್ಯಸಾಚಿ ಅವರ ಕೋರಿಕೆಯಂತೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು. ಅವರ ಸೇರ್ಪಡೆಗೆ ಮಮತಾ ಅವರು ಅನುಮೋದನೆ ನೀಡಿದ್ದಾರೆ’ ಎಂದು ಚಟರ್ಜಿ ಹೇಳಿದರು.</p>.<p class="bodytext">ಟಿಎಂಸಿ ನೀಡುವ ಯಾವುದೇ ಜವಾಬ್ದಾರಿಯನ್ನು ವಿನಮ್ರವಾಗಿ ನಿಭಾಯಿಸುವುದಾಗಿ ಸವ್ಯಸಾಚಿ ಹೇಳಿದರು.</p>.<p class="bodytext">‘ಕೆಲವು ತಪ್ಪು ತಿಳುವಳಿಕೆಗಳಿಂದ ನಾನು ಟಿಎಂಸಿ ತೊರೆಯಬೇಕಾಯಿತು. ಆದರೆ ಅದೆಲ್ಲ ಈಗ ನಿವಾರಣೆಯಾಗಿದೆ. ಟಿಎಂಸಿ ಜೊತೆ ಇಂದು ನನ್ನ ಹೊಸ ಪ್ರಯಾಣ ಆರಂಭವಾಗಿದೆ’ ಎಂದೂ ಹೇಳಿದರು.</p>.<p class="bodytext">ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸಹ ಕಳೆದ ತಿಂಗಳು ಟಿಎಂಸಿ ಸೇರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೋಲ್ಕತ್ತ:</strong> ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಬಿಧನ್ ನಗರ ಪಾಲಿಕೆಯ (ಬಿಎಂಸಿ) ಮಾಜಿ ಮೇಯರ್ ಸವ್ಯಸಾಚಿ ದತ್ತ ಗುರುವಾರ ಮತ್ತೆ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ.</p>.<p class="title">ಸವ್ಯಸಾಚಿ ಅವರು ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಲು ಟಿಎಂಸಿ ಪಕ್ಷವನ್ನು ತೊರೆದಿದ್ದರು.</p>.<p class="bodytext">ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿಯೋ ಅಲ್ಲೆಲ್ಲ ತಾಲಿಬಾನ್ ಮಾದರಿ ಸರ್ಕಾರ ನಡೆಸುತ್ತಿದೆ ಎಂದು ಸವ್ಯಸಾಚಿ ದತ್ತ ಆರೋಪಿಸಿದ್ದಾರೆ.</p>.<p class="bodytext">ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಪುಟ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ಕಚೇರಿಯಲ್ಲಿ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸವ್ಯಸಾಚಿ ಅವರನ್ನು ಸ್ವಾಗತಿಸಿದರು.</p>.<p class="bodytext">‘ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಸವ್ಯಸಾಚಿ ಅವರ ಕೋರಿಕೆಯಂತೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು. ಅವರ ಸೇರ್ಪಡೆಗೆ ಮಮತಾ ಅವರು ಅನುಮೋದನೆ ನೀಡಿದ್ದಾರೆ’ ಎಂದು ಚಟರ್ಜಿ ಹೇಳಿದರು.</p>.<p class="bodytext">ಟಿಎಂಸಿ ನೀಡುವ ಯಾವುದೇ ಜವಾಬ್ದಾರಿಯನ್ನು ವಿನಮ್ರವಾಗಿ ನಿಭಾಯಿಸುವುದಾಗಿ ಸವ್ಯಸಾಚಿ ಹೇಳಿದರು.</p>.<p class="bodytext">‘ಕೆಲವು ತಪ್ಪು ತಿಳುವಳಿಕೆಗಳಿಂದ ನಾನು ಟಿಎಂಸಿ ತೊರೆಯಬೇಕಾಯಿತು. ಆದರೆ ಅದೆಲ್ಲ ಈಗ ನಿವಾರಣೆಯಾಗಿದೆ. ಟಿಎಂಸಿ ಜೊತೆ ಇಂದು ನನ್ನ ಹೊಸ ಪ್ರಯಾಣ ಆರಂಭವಾಗಿದೆ’ ಎಂದೂ ಹೇಳಿದರು.</p>.<p class="bodytext">ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸಹ ಕಳೆದ ತಿಂಗಳು ಟಿಎಂಸಿ ಸೇರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>