ದ್ವೇಷ ಭಾಷಣ ಪ್ರಕರಣದಲ್ಲಿ ಎಸ್ಪಿ ಶಾಸಕ ಅಜಂ ಖಾನ್ಗೆ ಇತ್ತೀಚೆಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ರಾಂಪುರ ಕ್ಷೇತ್ರ ತೆರವಾಗಿರುವುದಾಗಿ ಅಧಿಸೂಚನೆ ಹೊರಡಿಸಿದ್ದರು. ಇದರ ಬೆನ್ನಿಗೇ ವಿಧಾನಸಭೆ ಕಾರ್ಯದರ್ಶಿ ಸತೀಸ್ ಮಹಾನ್ ಅವರಿಗೆ ಪತ್ರ ಬರೆದಿದ್ದ ಆರ್ಎಲ್ಡಿ ನಾಯಕ ಜಯಂತ್ ಚೌಧರಿ, ಅಜಂ ಖಾನ್ ಅವರ ಕ್ಷೇತ್ರ ತೆರವಾಗಿರುವುದಾಗಿ ಘೋಷಣೆ ಮಾಡಿದ್ದೇ ಆದರೆ, ಜೈಲು ಶಿಕ್ಷೆಗೆ ಗುರಿಯಾಗಿರುವ ಸೈನಿ ಅವರನ್ನು ಏಕೆ ಅನರ್ಹ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.