ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಯಾವುದೇ ಪೂರ್ವ ಮಾಹಿತಿ ಇಲ್ಲದೆ ವಿದ್ಯಾರ್ಥಿವೇತನವನ್ನು ರದ್ದು ಮಾಡಲಾಗಿದೆ. ಇದರಿಂದ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದ ಮೆಟ್ರಿಕ್ ಪೂರ್ವ ವೇತನ ಯೋಜನೆ ಕೂಡ ಅನ್ವಯವಾಗುವುದಿಲ್ಲ. ಈ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷಣ ಎನ್ನುವುದು ಎಲ್ಲರಿಗೂ ಉಚಿತ. ವಿದ್ಯಾರ್ಥಿ ವೇತನ ಅದಕ್ಕೆ ಪ್ರೋತ್ಸಾಹವಿದ್ದಂತೆ. ಮಕ್ಕಳನ್ನು ಬಾಲಕಾರ್ಮಿಕತೆಯೆಡೆಗೆ ತಳ್ಳಬೇಡಿ. ವಿದ್ಯೆ ಕಲಿಯಲಿ. ಮತ್ತೊಮ್ಮೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ ಎಂದರು.