<p><strong>ಕಣ್ಣೂರು:</strong> ಸಿಪಿಎಂ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಒಂಬತ್ತು ಮಂದಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. </p>.<p>‘ಪೊಲೀಸ್ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ’ ಎಂಬುದನ್ನು ಉಲ್ಲೇಖಿಸಿ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. </p>.<p>2015ರಲ್ಲಿ ಕಣ್ಣೂರಿನ ಚಿಟ್ಟಾರಿಪರಂಬದಲ್ಲಿ ಪ್ರೇಮನ್ (45) ಎಂಬವರ ಮೇಲೆ ಗುಂಪೊಂದು ದಾಳಿ ಮಾಡಿತ್ತು. ನಂತರ ಆಸ್ಪತ್ರೆಯಲ್ಲಿ ಪ್ರೇಮನ್ ಸಾವಿಗೀಡಾದರು. </p>.<p>ಸಜೇಶ್ ಸಿ, ಪ್ರಜೇಶ್ ಡಿ, ಇಂಚಿಕಂಡಿ ನಿಶಾಂತ್, ಲಿಜಿನ್ ಪಿ., ಮನ್ಪಡ್ಡಿ ವಿನೀಶ್, ಸಿ. ರಾಜೇಶ್, ನಿಖಿಲ್ ಎನ್., ಆರ್. ರಮೇಶ್ ಹಾಗೂ ರಂಜಿತ್ ಸಿ.ವಿ. ಈ ಪ್ರಕರಣದಲ್ಲಿ ಖುಲಾಸೆಗೊಂಡವರು. </p>.<p>ಇನ್ನೊಬ್ಬ ಆರೋಪಿ ಶ್ಯಾಮ್ ಪ್ರಸಾದ್ , 2018ರಲ್ಲಿ ನಡೆದ ರಾಜಕೀಯ ಘರ್ಷಣೆಯಲ್ಲಿ ಕೊಲೆಯಾದರು ಎಂದು ವಕೀಲರು ತಿಳಿಸಿದರು.</p>.ಸಿಪಿಎಂ ಕಾರ್ಯಕರ್ತನ ಹತ್ಯೆ: 9 ಮಂದಿ RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣೂರು:</strong> ಸಿಪಿಎಂ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಒಂಬತ್ತು ಮಂದಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. </p>.<p>‘ಪೊಲೀಸ್ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ’ ಎಂಬುದನ್ನು ಉಲ್ಲೇಖಿಸಿ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. </p>.<p>2015ರಲ್ಲಿ ಕಣ್ಣೂರಿನ ಚಿಟ್ಟಾರಿಪರಂಬದಲ್ಲಿ ಪ್ರೇಮನ್ (45) ಎಂಬವರ ಮೇಲೆ ಗುಂಪೊಂದು ದಾಳಿ ಮಾಡಿತ್ತು. ನಂತರ ಆಸ್ಪತ್ರೆಯಲ್ಲಿ ಪ್ರೇಮನ್ ಸಾವಿಗೀಡಾದರು. </p>.<p>ಸಜೇಶ್ ಸಿ, ಪ್ರಜೇಶ್ ಡಿ, ಇಂಚಿಕಂಡಿ ನಿಶಾಂತ್, ಲಿಜಿನ್ ಪಿ., ಮನ್ಪಡ್ಡಿ ವಿನೀಶ್, ಸಿ. ರಾಜೇಶ್, ನಿಖಿಲ್ ಎನ್., ಆರ್. ರಮೇಶ್ ಹಾಗೂ ರಂಜಿತ್ ಸಿ.ವಿ. ಈ ಪ್ರಕರಣದಲ್ಲಿ ಖುಲಾಸೆಗೊಂಡವರು. </p>.<p>ಇನ್ನೊಬ್ಬ ಆರೋಪಿ ಶ್ಯಾಮ್ ಪ್ರಸಾದ್ , 2018ರಲ್ಲಿ ನಡೆದ ರಾಜಕೀಯ ಘರ್ಷಣೆಯಲ್ಲಿ ಕೊಲೆಯಾದರು ಎಂದು ವಕೀಲರು ತಿಳಿಸಿದರು.</p>.ಸಿಪಿಎಂ ಕಾರ್ಯಕರ್ತನ ಹತ್ಯೆ: 9 ಮಂದಿ RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>