<p><strong>ಕೊಲಂಬೊ</strong>: ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಎಂಟು ಮಂದಿ ಆಟಗಾರರು ಗುರುವಾರ ತವರಿಗೆ ಮರಳಲು ಸಜ್ಜಾಗಿದ್ದಾರೆ. ಇಸ್ಲಾಮಾಬಾದಿನಲ್ಲಿ ಭೀಕರ ಬಾಂಬ್ ಸ್ಪೋಟದ ನಂತರ ಆಟಗಾರರು ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದಾರೆ.</p>.<p>ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದರು.</p>.<p>ಆಟಗಾರರ ಮರಳುವ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮೂಲವೊಂದು ಖಚಿತಪಡಿಸಿದೆ. ಹೀಗಾಗಿ ಗುರುವಾರ ರಾವಲ್ಪಿಂಡಿಯಲ್ಲಿ ನಿಗದಿಯಾಗಿರುವ ಪಂದ್ಯ ರದ್ದಾಗುವುದು ಖಚಿತವಾಗಿದೆ. ಇದೇ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯವನ್ನು ಪಾಕ್ ಗೆದ್ದುಕೊಂಡಿತ್ತು.</p>.<p>ತವರಿಗೆ ಮರಳುತ್ತಿರುವ ಎಂಟು ಆಟಗಾರರ ಬದಲಿಗೆ ಬೇರೆಯವರನ್ನು ಕಳುಹಿಸಲಾಗುವುದು ಎಂದೂ ಅದು ತಿಳಿಸಿದೆ.</p>.<p>2009ರಲ್ಲಿ ಲಾಹೋರ್ನ ಗಡಾಫಿ ಕ್ರೀಡಾಂಗಣದತ್ತ ಪ್ರಯಾಣಿಸುತ್ತಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಬಂದೂಕುದಾರಿ ಉಗ್ರರು ದಾಳಿ ನಡೆಸಿದ್ದರು.</p>
<p><strong>ಕೊಲಂಬೊ</strong>: ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಎಂಟು ಮಂದಿ ಆಟಗಾರರು ಗುರುವಾರ ತವರಿಗೆ ಮರಳಲು ಸಜ್ಜಾಗಿದ್ದಾರೆ. ಇಸ್ಲಾಮಾಬಾದಿನಲ್ಲಿ ಭೀಕರ ಬಾಂಬ್ ಸ್ಪೋಟದ ನಂತರ ಆಟಗಾರರು ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದಾರೆ.</p>.<p>ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದರು.</p>.<p>ಆಟಗಾರರ ಮರಳುವ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮೂಲವೊಂದು ಖಚಿತಪಡಿಸಿದೆ. ಹೀಗಾಗಿ ಗುರುವಾರ ರಾವಲ್ಪಿಂಡಿಯಲ್ಲಿ ನಿಗದಿಯಾಗಿರುವ ಪಂದ್ಯ ರದ್ದಾಗುವುದು ಖಚಿತವಾಗಿದೆ. ಇದೇ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯವನ್ನು ಪಾಕ್ ಗೆದ್ದುಕೊಂಡಿತ್ತು.</p>.<p>ತವರಿಗೆ ಮರಳುತ್ತಿರುವ ಎಂಟು ಆಟಗಾರರ ಬದಲಿಗೆ ಬೇರೆಯವರನ್ನು ಕಳುಹಿಸಲಾಗುವುದು ಎಂದೂ ಅದು ತಿಳಿಸಿದೆ.</p>.<p>2009ರಲ್ಲಿ ಲಾಹೋರ್ನ ಗಡಾಫಿ ಕ್ರೀಡಾಂಗಣದತ್ತ ಪ್ರಯಾಣಿಸುತ್ತಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಬಂದೂಕುದಾರಿ ಉಗ್ರರು ದಾಳಿ ನಡೆಸಿದ್ದರು.</p>