<p><strong>ನವದೆಹಲಿ</strong>: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಕೃತಿ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕುರಿತ ವಿವಾದವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. </p><p>ಈ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (ಪಿಆರ್ಎಚ್ಐ), ‘ನರವಣೆ ಅವರ ಪುಸ್ತಕವನ್ನು ಈ ವರೆಗೆ ಯಾವುದೇ ರೂಪದಲ್ಲಿ ಸಂಸ್ಥೆ ಪ್ರಕಟಿಸಿಲ್ಲ’ ಎಂದು ಹೇಳಿದೆ.</p><p>ಪುಸ್ತಕದ ಲಭ್ಯತೆ ಕುರಿತು ನರವಣೆ ಅವರು 2023ರ ಡಿಸೆಂಬರ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಲ್ಲೇಖಿಸಿದ ಬೆನ್ನಲ್ಲೇ, ಪಿಆರ್ಎಚ್ಐ ಈ ಸ್ಪಷ್ಟನೆ ನೀಡಿದೆ.</p><p>‘ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆ ಬಗ್ಗೆ ಮಾಡುವ ಘೋಷಣೆಗೂ ಹಾಗೂ ಮುಂಗಡವಾಗಿ ಅದನ್ನು ಕಾಯ್ದಿರಿಸುವ ಅವಕಾಶದ ಕುರಿತು ಘೋಷಿಸುವುದಕ್ಕೂ ವ್ಯತ್ಯಾಸ ಇದೆ. ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟಗೊಂಡಿದೆ ಎಂಬುದಾಗಿ ಅರ್ಥೈಸಬಾರದು’ ಎಂದು ಹೇಳಿದೆ.</p><p>‘ಒಂದು ಪುಸ್ತಕ ಕುರಿತು ಮಾಡುವ ಘೋಷಣೆಯು, ಬರುವ ದಿನಗಳಲ್ಲಿ ಅದನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆ ಯೋಜಿಸಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಹೇಳಿದೆ. </p><p>‘ಪುಸ್ತಕವೊಂದನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ನೀಡುವ ಪರಿಪಾಟ ಕೂಡ ರೂಢಿಯಲ್ಲಿದೆ. ಪುಸ್ತಕ ಬಿಡುಗಡೆಗೂ ಮುನ್ನವೇ, ಓದುಗರು ಹಾಗೂ ಚಿಲ್ಲರೆ ಮಾರಾಟಗಾರರು ತಮಗೆ ಬೇಕಾಗುವಷ್ಟು ಪ್ರತಿಗಳನ್ನು ಕಾಯ್ದಿರಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ, ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟವಾಗಿದೆ ಅಥವಾ ಖರೀದಿಗೆ ಲಭ್ಯವಿದೆ ಎಂದರ್ಥವಲ್ಲ’ ಎಂದೂ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಕೃತಿ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕುರಿತ ವಿವಾದವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. </p><p>ಈ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (ಪಿಆರ್ಎಚ್ಐ), ‘ನರವಣೆ ಅವರ ಪುಸ್ತಕವನ್ನು ಈ ವರೆಗೆ ಯಾವುದೇ ರೂಪದಲ್ಲಿ ಸಂಸ್ಥೆ ಪ್ರಕಟಿಸಿಲ್ಲ’ ಎಂದು ಹೇಳಿದೆ.</p><p>ಪುಸ್ತಕದ ಲಭ್ಯತೆ ಕುರಿತು ನರವಣೆ ಅವರು 2023ರ ಡಿಸೆಂಬರ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಲ್ಲೇಖಿಸಿದ ಬೆನ್ನಲ್ಲೇ, ಪಿಆರ್ಎಚ್ಐ ಈ ಸ್ಪಷ್ಟನೆ ನೀಡಿದೆ.</p><p>‘ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆ ಬಗ್ಗೆ ಮಾಡುವ ಘೋಷಣೆಗೂ ಹಾಗೂ ಮುಂಗಡವಾಗಿ ಅದನ್ನು ಕಾಯ್ದಿರಿಸುವ ಅವಕಾಶದ ಕುರಿತು ಘೋಷಿಸುವುದಕ್ಕೂ ವ್ಯತ್ಯಾಸ ಇದೆ. ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟಗೊಂಡಿದೆ ಎಂಬುದಾಗಿ ಅರ್ಥೈಸಬಾರದು’ ಎಂದು ಹೇಳಿದೆ.</p><p>‘ಒಂದು ಪುಸ್ತಕ ಕುರಿತು ಮಾಡುವ ಘೋಷಣೆಯು, ಬರುವ ದಿನಗಳಲ್ಲಿ ಅದನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆ ಯೋಜಿಸಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಹೇಳಿದೆ. </p><p>‘ಪುಸ್ತಕವೊಂದನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ನೀಡುವ ಪರಿಪಾಟ ಕೂಡ ರೂಢಿಯಲ್ಲಿದೆ. ಪುಸ್ತಕ ಬಿಡುಗಡೆಗೂ ಮುನ್ನವೇ, ಓದುಗರು ಹಾಗೂ ಚಿಲ್ಲರೆ ಮಾರಾಟಗಾರರು ತಮಗೆ ಬೇಕಾಗುವಷ್ಟು ಪ್ರತಿಗಳನ್ನು ಕಾಯ್ದಿರಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ, ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟವಾಗಿದೆ ಅಥವಾ ಖರೀದಿಗೆ ಲಭ್ಯವಿದೆ ಎಂದರ್ಥವಲ್ಲ’ ಎಂದೂ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>