<p><strong>ನವದೆಹಲಿ</strong>: ಪಶ್ಚಿಮ ಬಂಗಾಳದ ಸೇನಾ ಕ್ಯಾಂಪ್ನಲ್ಲಿ ಸೈನಿಕರೊಬ್ಬರಿಗೆ ಊರುಗೋಲು ಹಿಡಿದುಕೊಂಡು ನೆಲದ ಮೇಲೆ ಉರುಳಾಡುವಂತೆ ಶಿಕ್ಷೆ ವಿಧಿಸಿದ ಕಮಾಂಡಿಂಗ್ ಅಧಿಕಾರಿ ವರ್ತನೆಯ ಕುರಿತಂತೆ ಗಡಿ ಭದ್ರತಾ ಪಡೆಯು (ಬಿಎಸ್ಎಫ್) ತನಿಖೆಗೆ ಆದೇಶ ನೀಡಿದೆ.</p>.<p>‘3ನೇ ಬೆಟಾಲಿಯನ್ನ ಸೈನಿಕರೊಬ್ಬರು ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ 162ನೇ ಬೆಟಾಲಿಯನ್ನ ಕಮಾಂಡೆಂಟ್ ಅಧಿಕಾರಿ ಈ ರೀತಿ ಶಿಕ್ಷಿಸಿದ್ದಾರೆ. ಸೆ.1ರಂದು ಈ ಘಟನೆ ನಡೆದಿದ್ದು, ಕೂಚ್ ಬೆಹಾರ್ನ ಗಡಿ ಕಾವಲು ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿ ನ್ಯಾಯಾಲಯ ವಿಚಾರಣೆಗೆ (ಎಸ್ಸಿಒಐ) ಆದೇಶಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ರೂಪ್ನಗರದಲ್ಲಿರುವ ಬೆಟಾಲಿಯನ್ ಕ್ಯಾಂಪ್ನಲ್ಲಿ ಎರಡು ಬೆಟಾಲಿಯನ್ಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕಾನ್ಸ್ಟೆಬಲ್ ರ್ಯಾಂಕ್ನ ಸೈನಿಕರೊಬ್ಬರಿಗೆ ಉರುಗೋಲು ಹಿಡಿದು ಉರುಳಾಡಲು ಸೂಚಿಸಲಾಗಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೂ ಸೂಚಿಸಿದ್ದು, ಘಟನೆಗೆ ಕಾರಣವಾದ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು’ ಎಂದು ಬಿಎಸ್ಎಫ್ನ ವಕ್ತಾರರು ತಿಳಿಸಿದ್ದಾರೆ.</p>.<p class="bodytext">‘ಘಟನೆಗಳನ್ನು ಕುರಿತು ವಿಸ್ತೃತ ವಿಚಾರಣೆ ನಡೆಸುವಂತೆ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನಾರವರ್ತನೆಯಾಗದಂತೆ ತಡೆಯಲಾಗುವುದು’ ಎಂದು ಹೇಳಿದ್ದಾರೆ.</p>.<p class="bodytext">ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 2.70 ಲಕ್ಷ ಸಿಬ್ಬಂದಿಯಿದ್ದು, ಇಡೀ ದೇಶದ ಗಡಿ ಕಾವಲಿನ ಹೊಣೆ ಹೊತ್ತುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಶ್ಚಿಮ ಬಂಗಾಳದ ಸೇನಾ ಕ್ಯಾಂಪ್ನಲ್ಲಿ ಸೈನಿಕರೊಬ್ಬರಿಗೆ ಊರುಗೋಲು ಹಿಡಿದುಕೊಂಡು ನೆಲದ ಮೇಲೆ ಉರುಳಾಡುವಂತೆ ಶಿಕ್ಷೆ ವಿಧಿಸಿದ ಕಮಾಂಡಿಂಗ್ ಅಧಿಕಾರಿ ವರ್ತನೆಯ ಕುರಿತಂತೆ ಗಡಿ ಭದ್ರತಾ ಪಡೆಯು (ಬಿಎಸ್ಎಫ್) ತನಿಖೆಗೆ ಆದೇಶ ನೀಡಿದೆ.</p>.<p>‘3ನೇ ಬೆಟಾಲಿಯನ್ನ ಸೈನಿಕರೊಬ್ಬರು ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ 162ನೇ ಬೆಟಾಲಿಯನ್ನ ಕಮಾಂಡೆಂಟ್ ಅಧಿಕಾರಿ ಈ ರೀತಿ ಶಿಕ್ಷಿಸಿದ್ದಾರೆ. ಸೆ.1ರಂದು ಈ ಘಟನೆ ನಡೆದಿದ್ದು, ಕೂಚ್ ಬೆಹಾರ್ನ ಗಡಿ ಕಾವಲು ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿ ನ್ಯಾಯಾಲಯ ವಿಚಾರಣೆಗೆ (ಎಸ್ಸಿಒಐ) ಆದೇಶಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ರೂಪ್ನಗರದಲ್ಲಿರುವ ಬೆಟಾಲಿಯನ್ ಕ್ಯಾಂಪ್ನಲ್ಲಿ ಎರಡು ಬೆಟಾಲಿಯನ್ಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕಾನ್ಸ್ಟೆಬಲ್ ರ್ಯಾಂಕ್ನ ಸೈನಿಕರೊಬ್ಬರಿಗೆ ಉರುಗೋಲು ಹಿಡಿದು ಉರುಳಾಡಲು ಸೂಚಿಸಲಾಗಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೂ ಸೂಚಿಸಿದ್ದು, ಘಟನೆಗೆ ಕಾರಣವಾದ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು’ ಎಂದು ಬಿಎಸ್ಎಫ್ನ ವಕ್ತಾರರು ತಿಳಿಸಿದ್ದಾರೆ.</p>.<p class="bodytext">‘ಘಟನೆಗಳನ್ನು ಕುರಿತು ವಿಸ್ತೃತ ವಿಚಾರಣೆ ನಡೆಸುವಂತೆ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನಾರವರ್ತನೆಯಾಗದಂತೆ ತಡೆಯಲಾಗುವುದು’ ಎಂದು ಹೇಳಿದ್ದಾರೆ.</p>.<p class="bodytext">ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 2.70 ಲಕ್ಷ ಸಿಬ್ಬಂದಿಯಿದ್ದು, ಇಡೀ ದೇಶದ ಗಡಿ ಕಾವಲಿನ ಹೊಣೆ ಹೊತ್ತುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>