ನವದೆಹಲಿ:ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಸೋಮವಾರದಿಂದ ಆರಂಭವಾಗಲಿದ್ದು, ನಿರುದ್ಯೋಗ, ಇಪಿಎಫ್ ಬಡ್ಡಿದರ ಕಡಿತ, ಉಕ್ರೇನ್ನಿಂದ ಭಾರತೀಯರ ತೆರವು ಮೊದಲಾದ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.ಬಜೆಟ್ಗೆ ಅನುಮೋದನೆ ಪಡೆದ ಬಳಿಕ ಏಪ್ರಿಲ್ 8ರಂದು ಅಧಿವೇಶನ ಮುಕ್ತಾಯವಾಗಲಿದೆ.