<p><strong>ಮೀರಠ್</strong>: ‘ದೇಶದಲ್ಲಿ ಬಂಡವಾಳಶಾಹಿ ವಾದವು ತೀವ್ರವಾಗಿ ನೆಲೆಗೊಳ್ಳುತ್ತಿದೆ. ಸಣ್ಣ ರೈತರ ಜಮೀನುಗಳನ್ನು ಉದ್ಯಮಪತಿಗಳ ಕೈಗೆ ಇಡಲಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಸಂಘಟನೆಯ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಬುಧವಾರ ಅಭಿಪ್ರಾಯಪಟ್ಟರು.</p>.<p>‘ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ರೈತರ ಜಮೀನುಗಳನ್ನು ಹೀಗೆಯೇ ಬಂಡವಾಳಶಾಹಿಗಳಿಗೆ ನೀಡುತ್ತಿದ್ದರೆ, ಸಂಘಟನೆಯು ಚಳವಳಿ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ತಮ್ಮ ಜಮೀನನ್ನು ಸರ್ವೇ ಮಾಡುತ್ತಿದ್ದುದನ್ನು ವಿರೋಧಿಸಿ ಮನೋಹರ್ ಕುಶ್ವಾ ಎಂಬ ರೈತ ಸೋಮವಾರ ವಿದ್ಯುತ್ ಟವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಕುಟುಂಬವನ್ನು ರಾಕೇಶ್ ಟಿಕಾಯತ್ ಅವರು ಬುಧವಾರ ಭೇಟಿ ಮಾಡಿದರು. ಈ ವೇಳೆ ಟಿಕಾಯತ್ ಮಾತನಾಡಿದರು.</p>.<p>‘ಜಮೀನು ಸರ್ವೇ ಮಾಡಲು ಹೈಕೋರ್ಟ್ ತಡೆ ನೀಡಿದ್ದರೂ ಸರ್ವೇ ಮಾಡಲಾಗುತ್ತಿತ್ತು. ಈ ಕಾರಣದಿಂದಲೇ ಮನೋಹರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀರಠ್</strong>: ‘ದೇಶದಲ್ಲಿ ಬಂಡವಾಳಶಾಹಿ ವಾದವು ತೀವ್ರವಾಗಿ ನೆಲೆಗೊಳ್ಳುತ್ತಿದೆ. ಸಣ್ಣ ರೈತರ ಜಮೀನುಗಳನ್ನು ಉದ್ಯಮಪತಿಗಳ ಕೈಗೆ ಇಡಲಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಸಂಘಟನೆಯ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಬುಧವಾರ ಅಭಿಪ್ರಾಯಪಟ್ಟರು.</p>.<p>‘ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ರೈತರ ಜಮೀನುಗಳನ್ನು ಹೀಗೆಯೇ ಬಂಡವಾಳಶಾಹಿಗಳಿಗೆ ನೀಡುತ್ತಿದ್ದರೆ, ಸಂಘಟನೆಯು ಚಳವಳಿ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ತಮ್ಮ ಜಮೀನನ್ನು ಸರ್ವೇ ಮಾಡುತ್ತಿದ್ದುದನ್ನು ವಿರೋಧಿಸಿ ಮನೋಹರ್ ಕುಶ್ವಾ ಎಂಬ ರೈತ ಸೋಮವಾರ ವಿದ್ಯುತ್ ಟವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಕುಟುಂಬವನ್ನು ರಾಕೇಶ್ ಟಿಕಾಯತ್ ಅವರು ಬುಧವಾರ ಭೇಟಿ ಮಾಡಿದರು. ಈ ವೇಳೆ ಟಿಕಾಯತ್ ಮಾತನಾಡಿದರು.</p>.<p>‘ಜಮೀನು ಸರ್ವೇ ಮಾಡಲು ಹೈಕೋರ್ಟ್ ತಡೆ ನೀಡಿದ್ದರೂ ಸರ್ವೇ ಮಾಡಲಾಗುತ್ತಿತ್ತು. ಈ ಕಾರಣದಿಂದಲೇ ಮನೋಹರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>