‘ಪಾರ್ಸೆಲ್ಗಳನ್ನು ಸ್ವೀಕರಿಸಿ, ಭವಿಷ್ಯದಲ್ಲಿ ಆಗುವ ಸಂಕಷ್ಟದ ನಿವಾರಣೆಗೆ ಭಾರಿ ವೆಚ್ಚ ಮಾಡುವ ಬದಲು, ಈಗಲೇ ಅವುಗಳನ್ನು ತಿರಸ್ಕರಿಸುವುದು ಉತ್ತಮ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಸರಕುಗಳ ತಪಾಸಣೆ ಮತ್ತಷ್ಟೂ ಕಟ್ಟುನಿಟ್ಟಾಗಿ ನಡೆಸಬೇಕು’ ಎಂದು ಫೆಡರೇಷನ್ ಆಫ್ ಸೀಡ್ ಇಂಡಸ್ಟ್ರಿ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕ ರಾಮ್ ಕೌಂಡಿಣ್ಯ ಹೇಳಿದ್ದಾರೆ.