‘ಬಹಳಷ್ಟು ಕಾಮಗಾರಿಗಳು ಬಾಕಿ ಇವೆ. ಸಾಕಷ್ಟು ಜನ ಅಯೋಧ್ಯೆಗೆ ಭೇಟಿ ನೀಡಲು ಈಗಾಗಲೇ ಯೋಜನೆ ರೂಪಿಸುತ್ತಿದ್ದಾರೆ. ಅತಿಯಾದ ಜನದಟ್ಟಣೆ ನಿಯಂತ್ರಿಸುವುದು ಅಸಾಧ್ಯ. ಹೀಗಾಗಿ ಭಕ್ತರು ತಾವಿರುವ ಸ್ಥಳದಲ್ಲೇ ದೇಗುಲಕ್ಕೆ ಭೇಟಿ ನೀಡಿ ಆನಂದ ಮಹೋತ್ಸವ ಆಚರಿಸಬೇಕು. ಅದು ದೇವ ಅಥವಾ ದೇವಿಯ ಗುಡಿಯೇ ಆಗಿರಬಹುದು. ಸಣ್ಣದೋ ಅಥವಾ ದೊಡ್ಡ ದೇಗುಲವೇ ಆಗಿರಬಹುದು. ಅಲ್ಲಿ ಭೇಟಿ ನೀಡಿ ಮಹೋತ್ಸವದಲ್ಲಿ ಪಾಲ್ಗೊಳ್ಳಿ’ ಎಂದಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಜ. 16ರಿಂದ ಆರಂಭವಾಗಲಿವೆ. ದೇವರ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯವನ್ನು ಲಕ್ಷ್ಮಿಕಾಂತ ದೀಕ್ಷಿತ್ ಅವರು ನಡೆಸಲಿದ್ದಾರೆ’ ಎಂದು ಚಂಪತ್ ರೈ ವಿವರಿಸಿದ್ದಾರೆ.
ಭೇಟಿ ನೀಡಲಿರುವ ಸಾವಿರಾರು ಜನರಿಗಾಗಿ ಅಯೋಧ್ಯೆಯಲ್ಲಿ ಹಲವಾರು ಟೆಂಟ್ಗಳನ್ನು ಸ್ಥಾಪಿಸಲಾಗುತ್ತಿದೆ.