<p><strong>ಚಂದ್ರಾಪುರ (ಮಹಾರಾಷ್ಟ್ರ)</strong>: ಸಾಲವನ್ನು ಹಿಂಪಡೆಯಲು ರೈತರೊಬ್ಬರಿಂದ ಒತ್ತಾಯಪೂರ್ವಕವಾಗಿ ಮೂತ್ರಪಿಂಡವನ್ನು ಮಾರಾಟ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.</p>.<p>ರೈತ ರೋಷನ್ ಕುಡೆ (29), 2021ರಲ್ಲಿ ಶೇ 40ರಷ್ಟು ಬಡ್ಡಿದರದಲ್ಲಿ ₹50,000 ಹಣವನ್ನು ಇಬ್ಬರಿಂದ ಸಾಲ ಪಡೆದಿದ್ದರು. ಬಳಿಕ ಸಾಲ ನೀಡಿದವರು ಒಟ್ಟು ₹74 ಲಕ್ಷ ಬಾಕಿ ತೀರಿಸಬೇಕು ಎಂದು ಹೇಳಿದ್ದರು. ಸಾಲವನ್ನು ತೀರಿಸಲು ಮೂತ್ರಪಿಂಡವನ್ನು ಮಾರುವಂತೆ ಸಾಲ ನೀಡಿದ ಒಬ್ಬರು ಒತ್ತಾಯಿಸಿದ್ದಾರೆ ಎಂದು ರೋಷನ್ ಹೇಳಿದ್ದಾರೆ.</p>.<p>ಏಜೆಂಟ್ ಸಹಾಯದಿಂದ ತಮ್ಮನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಬಳಿಕ ಕಾಂಬೋಡಿಯಾದಲ್ಲಿ ತಮ್ಮ ಒಂದು ಮೂತ್ರಪಿಂಡವನ್ನು ತೆಗೆಸಿದ್ದಾರೆ. ಅದರಿಂದ ₹8 ಲಕ್ಷ ಹಣ ಪಡೆದಿದ್ದಾರೆ ಎಂದು ರೈತ ಹೇಳಿಕೊಂಡಿದ್ದಾರೆ.</p>.<p>ಈ ಕುರಿತು ತನಿಖೆ ನಡೆಸುತ್ತಿರುವ ಚಂದ್ರಾಪುರ ಪೊಲೀಸರು, ರೋಷನ್ ಅವರನ್ನು ಚಂದ್ರಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾಗ ಅವರ ಒಂದು ಮೂತ್ರಪಿಂಡ ಕಾಣೆಯಾಗಿರುವುದು ತಿಳಿದುಬಂದಿದೆ. </p>.<p class="title">ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಚಂದ್ರಾಪುರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂದ್ರಾಪುರ (ಮಹಾರಾಷ್ಟ್ರ)</strong>: ಸಾಲವನ್ನು ಹಿಂಪಡೆಯಲು ರೈತರೊಬ್ಬರಿಂದ ಒತ್ತಾಯಪೂರ್ವಕವಾಗಿ ಮೂತ್ರಪಿಂಡವನ್ನು ಮಾರಾಟ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.</p>.<p>ರೈತ ರೋಷನ್ ಕುಡೆ (29), 2021ರಲ್ಲಿ ಶೇ 40ರಷ್ಟು ಬಡ್ಡಿದರದಲ್ಲಿ ₹50,000 ಹಣವನ್ನು ಇಬ್ಬರಿಂದ ಸಾಲ ಪಡೆದಿದ್ದರು. ಬಳಿಕ ಸಾಲ ನೀಡಿದವರು ಒಟ್ಟು ₹74 ಲಕ್ಷ ಬಾಕಿ ತೀರಿಸಬೇಕು ಎಂದು ಹೇಳಿದ್ದರು. ಸಾಲವನ್ನು ತೀರಿಸಲು ಮೂತ್ರಪಿಂಡವನ್ನು ಮಾರುವಂತೆ ಸಾಲ ನೀಡಿದ ಒಬ್ಬರು ಒತ್ತಾಯಿಸಿದ್ದಾರೆ ಎಂದು ರೋಷನ್ ಹೇಳಿದ್ದಾರೆ.</p>.<p>ಏಜೆಂಟ್ ಸಹಾಯದಿಂದ ತಮ್ಮನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಬಳಿಕ ಕಾಂಬೋಡಿಯಾದಲ್ಲಿ ತಮ್ಮ ಒಂದು ಮೂತ್ರಪಿಂಡವನ್ನು ತೆಗೆಸಿದ್ದಾರೆ. ಅದರಿಂದ ₹8 ಲಕ್ಷ ಹಣ ಪಡೆದಿದ್ದಾರೆ ಎಂದು ರೈತ ಹೇಳಿಕೊಂಡಿದ್ದಾರೆ.</p>.<p>ಈ ಕುರಿತು ತನಿಖೆ ನಡೆಸುತ್ತಿರುವ ಚಂದ್ರಾಪುರ ಪೊಲೀಸರು, ರೋಷನ್ ಅವರನ್ನು ಚಂದ್ರಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾಗ ಅವರ ಒಂದು ಮೂತ್ರಪಿಂಡ ಕಾಣೆಯಾಗಿರುವುದು ತಿಳಿದುಬಂದಿದೆ. </p>.<p class="title">ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಚಂದ್ರಾಪುರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>