<p><strong>ಡೆಹರಾಡೂನ್:</strong> ಚಾರ್ಧಾಮ್ ಯಾತ್ರೆ ಆರಂಭವಾಗುವ ಮೊದಲೇ ಭಕ್ತರ ನೋಂದಣಿ ಸಂಖ್ಯೆ 17 ಲಕ್ಷ ತಲುಪಿದ್ದು, ಉತ್ತರಾಖಂಡ ಸರ್ಕಾರ ಸೋಮವಾರ ಆನ್ಲೈನ್ ನೋಂದಣಿ ಮಿತಿಯನ್ನು ಶೇ 75 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.</p><p>ಪ್ರತಿ ಧಾಮದ ಯಾತ್ರೆ ಮಾರ್ಗದಲ್ಲಿ ಹೆಚ್ಚಿನ ನೋಂದಣಿ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.</p><p>ಉತ್ತರಕಾಶಿ, ರುದ್ರಪ್ರಯಾಗ ಮತ್ತು ಚಮೋಲಿಯಲ್ಲಿನ ಹೋಟೆಲ್ ಮಾಲೀಕರೊಂದಿಗೆ ಯಾತ್ರೆಯ ಸಿದ್ಧತೆಗಳ ಕುರಿತು ಕಮಿಷನರ್ ವಿನಯ್ ಶಂಕರ್ ಪಾಂಡೆ ಸಭೆ ನಡೆಸಿದ್ದಾರೆ.</p><p>ಈ ವರ್ಷ ಉತ್ತರಕಾಶಿಯಲ್ಲಿನ ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ಅಕ್ಷಯ ತೃತೀಯವಾದ ಏ.30ರಂದು ತೆರೆಯುವ ಮೂಲಕ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.</p><p>ಮೇ.2 ರಂದು ಕೇದಾರನಾಥ ಮತ್ತು ಮೇ 4ರಂದು ಬದರಿನಾಥ ದೇಗುಲಗಳು ಬಾಗಿಲುಗಳು ತೆರೆಯಲಿವೆ.</p><p>ಮಾರ್ಚ್ 20ರಂದು ಸರ್ಕಾರ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಅಂದಿನಿಂದ 17 ಲಕ್ಷ ನೋಂದಣಿಯಾಗಿದೆ. ಅದರಲ್ಲಿ ಕೇದಾರನಾಥಕ್ಕೆ ಅತಿ ಹೆಚ್ಚು 6 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಾಯಿಸಿಕೊಂಡಿದ್ದಾರೆ, ಯಮುನೋತ್ರಿಗೆ 3 ಲಕ್ಷ ಮತ್ತು ಗಂಗೋತ್ರಿ, ಬದರಿನಾಥಕ್ಕೆ 5 ಲಕ್ಷ ನೋಂದಣಿಯಾಗಿದೆ. ಆಫ್ಲೈನ್ ನೋಂದಣಿ ಏ.25ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹರಾಡೂನ್:</strong> ಚಾರ್ಧಾಮ್ ಯಾತ್ರೆ ಆರಂಭವಾಗುವ ಮೊದಲೇ ಭಕ್ತರ ನೋಂದಣಿ ಸಂಖ್ಯೆ 17 ಲಕ್ಷ ತಲುಪಿದ್ದು, ಉತ್ತರಾಖಂಡ ಸರ್ಕಾರ ಸೋಮವಾರ ಆನ್ಲೈನ್ ನೋಂದಣಿ ಮಿತಿಯನ್ನು ಶೇ 75 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.</p><p>ಪ್ರತಿ ಧಾಮದ ಯಾತ್ರೆ ಮಾರ್ಗದಲ್ಲಿ ಹೆಚ್ಚಿನ ನೋಂದಣಿ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.</p><p>ಉತ್ತರಕಾಶಿ, ರುದ್ರಪ್ರಯಾಗ ಮತ್ತು ಚಮೋಲಿಯಲ್ಲಿನ ಹೋಟೆಲ್ ಮಾಲೀಕರೊಂದಿಗೆ ಯಾತ್ರೆಯ ಸಿದ್ಧತೆಗಳ ಕುರಿತು ಕಮಿಷನರ್ ವಿನಯ್ ಶಂಕರ್ ಪಾಂಡೆ ಸಭೆ ನಡೆಸಿದ್ದಾರೆ.</p><p>ಈ ವರ್ಷ ಉತ್ತರಕಾಶಿಯಲ್ಲಿನ ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ಅಕ್ಷಯ ತೃತೀಯವಾದ ಏ.30ರಂದು ತೆರೆಯುವ ಮೂಲಕ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.</p><p>ಮೇ.2 ರಂದು ಕೇದಾರನಾಥ ಮತ್ತು ಮೇ 4ರಂದು ಬದರಿನಾಥ ದೇಗುಲಗಳು ಬಾಗಿಲುಗಳು ತೆರೆಯಲಿವೆ.</p><p>ಮಾರ್ಚ್ 20ರಂದು ಸರ್ಕಾರ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಅಂದಿನಿಂದ 17 ಲಕ್ಷ ನೋಂದಣಿಯಾಗಿದೆ. ಅದರಲ್ಲಿ ಕೇದಾರನಾಥಕ್ಕೆ ಅತಿ ಹೆಚ್ಚು 6 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಾಯಿಸಿಕೊಂಡಿದ್ದಾರೆ, ಯಮುನೋತ್ರಿಗೆ 3 ಲಕ್ಷ ಮತ್ತು ಗಂಗೋತ್ರಿ, ಬದರಿನಾಥಕ್ಕೆ 5 ಲಕ್ಷ ನೋಂದಣಿಯಾಗಿದೆ. ಆಫ್ಲೈನ್ ನೋಂದಣಿ ಏ.25ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>