2019ರ ಬಳಿಕ ಕೋವಿಡ್ ನಿರ್ಬಂಧ ಇಲ್ಲದೆ ಯಾತ್ರೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಆದರೂ ದಿನನಿತ್ಯದ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಗಂಗೋತ್ರಿಗೆ 7,000, ಯಮುನೋತ್ರಿಗೆ 4,000, ಕೇದರನಾಥಕ್ಕೆ 12,000 ಮತ್ತು ಬದರಿನಾಥಕ್ಕೆ 15,000 ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ.