<p><strong>ಛತ್ತೀಸಗಢ:</strong> ಒಟ್ಟು 25 ನಕ್ಸಲರು ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಶರಣಾದವರಲ್ಲಿ ಐವರ ಸುಳಿವು ನೀಡಿದವರಿಗೆ ಒಟ್ಟು ₹28 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಗಂಗಲೂರ್ ಹಾಗೂ ಭೈರಮ್ಗಢದ ಮಾವೋ ಸಂಘಟನೆಗಳಲ್ಲಿ ಶರಣಾದ ನಕ್ಸಲರು ಸಕ್ರಿಯರಾಗಿದ್ದರು.</p>.<p>ಶಂಬತಿ ಮದ್ಕಂ (23) ಹಾಗೂ ಜ್ಯೋತಿ ಪುನೇಮ್ (27) ಎಂಬಿಬ್ಬರು ಮಹಿಳೆಯರು ಹಾಗೂ ಮಹೇಶ್ ಟೇಲಂ ಎಂಬುವವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು. </p>.<p>ಮದ್ಕಂ 2012ರಿಂದ ಮಾವೋ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಸುಕ್ಮಾ ಬಳಿಯ ಮಿನ್ಪಾ ಗ್ರಾಮದಲ್ಲಿ 2020ರಲ್ಲಿ ನಡೆದಿದ್ದ ಹೊಂಚು ದಾಳಿಯಲ್ಲಿ ಮದ್ಕಂ ಶಾಮೀಲಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. </p>.<p>2021ರಲ್ಲಿ 22 ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದ ಬಿಜಾಪುರ ದಾಳಿಯಲ್ಲಿಯೂ ಮದ್ಕಂ ಭಾಗಿಯಾಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದರು.</p>.<p>ಪುನೇಮ್ ಮತ್ತು ಟೇಲಂ ಈ ವರ್ಷ ಮೇನಲ್ಲಿ ಪಿಡಿಯಾ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ.</p>.<p>ವಿಷ್ಣು ಕರ್ತಂ ಅಲಿಯಾಸ್ ಮನು ಮತ್ತು ಜೈದೇವ್ ಪೋಡಿಯಮ್ ಅವರ ಸುಳಿವು ನೀಡಿದವರಿಗೆ ಕ್ರಮವಾಗಿ ₹3 ಲಕ್ಷ ಮತ್ತು ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.</p>.<p>ಶರಣಾಗಿರುವ ಗುಡ್ಡು ಕಕೇಮ್ ಮತ್ತು ಸುರ್ದು ಪುನೇಮ್ ಅವರ ಸುಳಿವು ನೀಡಿದವರಿಗೆ ತಲಾ ₹10,000 ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿಸಿದರು.</p>.<p>ಶರಣಾದವರಿಗೆ ಸರ್ಕಾರದ ನಿಯಮದ ಅನುಸಾರ ತಲಾ 25,000 ನೆರವು ಮತ್ತು ಪುನರ್ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.</p>.<p>ಇದರೊಂದಿಗೆ ಪ್ರಸಕ್ತ ವರ್ಷ 170 ನಕ್ಸಲರು ಶರಣಾಗಿದ್ದಾರೆ. ಇದೇ ಅವಧಿಯಲ್ಲಿ 346 ನಕ್ಸಲರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p><strong>ಪೊಲೀಸರಿಗೆ ಮಾಹಿತಿ ನೀಡಿದ ಆರೋಪ: ಹತ್ಯೆ</strong></p>.<p><strong>ಬಿಜಾಪುರ:</strong> ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ನಕ್ಸಲರು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ನಕ್ಸಲರು ಭಾನುವಾರ ನಡೆಸಿದ ‘ಪಂಚಾಯ್ತಿ’ಯಲ್ಲಿ ಸೀತು ಮಾದ್ವಿ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮಾದ್ವಿ ಸೇರಿ ಇಬ್ಬರನ್ನು ನಕ್ಸಲರು ತಮ್ಮ ಜೊತೆ ಕರೆದೊಯ್ದಿದ್ದರು. ಬಳಿಕ ಮಾದ್ವಿ ಅವರನ್ನು ಕೊಂದು ಮತ್ತೊಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛತ್ತೀಸಗಢ:</strong> ಒಟ್ಟು 25 ನಕ್ಸಲರು ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಶರಣಾದವರಲ್ಲಿ ಐವರ ಸುಳಿವು ನೀಡಿದವರಿಗೆ ಒಟ್ಟು ₹28 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಗಂಗಲೂರ್ ಹಾಗೂ ಭೈರಮ್ಗಢದ ಮಾವೋ ಸಂಘಟನೆಗಳಲ್ಲಿ ಶರಣಾದ ನಕ್ಸಲರು ಸಕ್ರಿಯರಾಗಿದ್ದರು.</p>.<p>ಶಂಬತಿ ಮದ್ಕಂ (23) ಹಾಗೂ ಜ್ಯೋತಿ ಪುನೇಮ್ (27) ಎಂಬಿಬ್ಬರು ಮಹಿಳೆಯರು ಹಾಗೂ ಮಹೇಶ್ ಟೇಲಂ ಎಂಬುವವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು. </p>.<p>ಮದ್ಕಂ 2012ರಿಂದ ಮಾವೋ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಸುಕ್ಮಾ ಬಳಿಯ ಮಿನ್ಪಾ ಗ್ರಾಮದಲ್ಲಿ 2020ರಲ್ಲಿ ನಡೆದಿದ್ದ ಹೊಂಚು ದಾಳಿಯಲ್ಲಿ ಮದ್ಕಂ ಶಾಮೀಲಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. </p>.<p>2021ರಲ್ಲಿ 22 ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದ ಬಿಜಾಪುರ ದಾಳಿಯಲ್ಲಿಯೂ ಮದ್ಕಂ ಭಾಗಿಯಾಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದರು.</p>.<p>ಪುನೇಮ್ ಮತ್ತು ಟೇಲಂ ಈ ವರ್ಷ ಮೇನಲ್ಲಿ ಪಿಡಿಯಾ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ.</p>.<p>ವಿಷ್ಣು ಕರ್ತಂ ಅಲಿಯಾಸ್ ಮನು ಮತ್ತು ಜೈದೇವ್ ಪೋಡಿಯಮ್ ಅವರ ಸುಳಿವು ನೀಡಿದವರಿಗೆ ಕ್ರಮವಾಗಿ ₹3 ಲಕ್ಷ ಮತ್ತು ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.</p>.<p>ಶರಣಾಗಿರುವ ಗುಡ್ಡು ಕಕೇಮ್ ಮತ್ತು ಸುರ್ದು ಪುನೇಮ್ ಅವರ ಸುಳಿವು ನೀಡಿದವರಿಗೆ ತಲಾ ₹10,000 ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿಸಿದರು.</p>.<p>ಶರಣಾದವರಿಗೆ ಸರ್ಕಾರದ ನಿಯಮದ ಅನುಸಾರ ತಲಾ 25,000 ನೆರವು ಮತ್ತು ಪುನರ್ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.</p>.<p>ಇದರೊಂದಿಗೆ ಪ್ರಸಕ್ತ ವರ್ಷ 170 ನಕ್ಸಲರು ಶರಣಾಗಿದ್ದಾರೆ. ಇದೇ ಅವಧಿಯಲ್ಲಿ 346 ನಕ್ಸಲರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p><strong>ಪೊಲೀಸರಿಗೆ ಮಾಹಿತಿ ನೀಡಿದ ಆರೋಪ: ಹತ್ಯೆ</strong></p>.<p><strong>ಬಿಜಾಪುರ:</strong> ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ನಕ್ಸಲರು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ನಕ್ಸಲರು ಭಾನುವಾರ ನಡೆಸಿದ ‘ಪಂಚಾಯ್ತಿ’ಯಲ್ಲಿ ಸೀತು ಮಾದ್ವಿ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮಾದ್ವಿ ಸೇರಿ ಇಬ್ಬರನ್ನು ನಕ್ಸಲರು ತಮ್ಮ ಜೊತೆ ಕರೆದೊಯ್ದಿದ್ದರು. ಬಳಿಕ ಮಾದ್ವಿ ಅವರನ್ನು ಕೊಂದು ಮತ್ತೊಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>