<p><strong>ರಾಯ್ಪುರ:</strong> ಛತ್ತೀಸಗಢ ರಾಜ್ಯವು ಎಡಪಂಥೀಯ ಉಗ್ರವಾದದ ಮೂಲೋತ್ಪಾಟನೆಯ (ನಕ್ಸಲ್) ಅಂಚಿನಲ್ಲಿದೆ ಎಂದು ರಾಜ್ಯಪಾಲ ರಮೆನ್ ಡೆಕಾ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.</p>.<p>ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಲ್ಲಿ 532 ನಕ್ಸಲರು ಹತರಾಗಿದ್ದು, 2,700 ನಕ್ಸಲರು ಶರಣಾಗತರಾಗಿದ್ದಾರೆ. 2,004 ಮಂದಿಯನ್ನು ಬಂಧಿಸಲಾಗಿದೆ’ ಎಂದರು.</p>.<p>‘ದಾರಿ ತಪ್ಪಿದ್ದ ಹಲವು ಯುವಕರು ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರದ ಪುನರ್ವಸತಿ ನೀತಿಯು ಪ್ರೇರಣೆ ನೀಡಿದೆ. ಉಗ್ರವಾದದ ಹಿಮ್ಮೆಟ್ಟಿಸುವಿಕೆಯು ಅಭಿವೃದ್ಧಿಯ ಬೆಳಕು ಮೂಡಿಸುತ್ತದೆ’ ಎಂದು ಹೇಳಿದರು.</p>.<p>‘ಬಸ್ತರ್ ಸೇರಿದಂತೆ ನಕ್ಸಲ್ ಪ್ರಭಾವ ಇದ್ದ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಿದೆ. ಹಳ್ಳಿಗಳು ಅಭಿವೃದ್ಧಿ ಕಾಣುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಕ್ಕೂ ಆದ್ಯತೆ ಸಿಕ್ಕಿದೆ’ ಎಂದು ಭಾಷಣದಲ್ಲಿ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ:</strong> ಛತ್ತೀಸಗಢ ರಾಜ್ಯವು ಎಡಪಂಥೀಯ ಉಗ್ರವಾದದ ಮೂಲೋತ್ಪಾಟನೆಯ (ನಕ್ಸಲ್) ಅಂಚಿನಲ್ಲಿದೆ ಎಂದು ರಾಜ್ಯಪಾಲ ರಮೆನ್ ಡೆಕಾ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.</p>.<p>ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಲ್ಲಿ 532 ನಕ್ಸಲರು ಹತರಾಗಿದ್ದು, 2,700 ನಕ್ಸಲರು ಶರಣಾಗತರಾಗಿದ್ದಾರೆ. 2,004 ಮಂದಿಯನ್ನು ಬಂಧಿಸಲಾಗಿದೆ’ ಎಂದರು.</p>.<p>‘ದಾರಿ ತಪ್ಪಿದ್ದ ಹಲವು ಯುವಕರು ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರದ ಪುನರ್ವಸತಿ ನೀತಿಯು ಪ್ರೇರಣೆ ನೀಡಿದೆ. ಉಗ್ರವಾದದ ಹಿಮ್ಮೆಟ್ಟಿಸುವಿಕೆಯು ಅಭಿವೃದ್ಧಿಯ ಬೆಳಕು ಮೂಡಿಸುತ್ತದೆ’ ಎಂದು ಹೇಳಿದರು.</p>.<p>‘ಬಸ್ತರ್ ಸೇರಿದಂತೆ ನಕ್ಸಲ್ ಪ್ರಭಾವ ಇದ್ದ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಿದೆ. ಹಳ್ಳಿಗಳು ಅಭಿವೃದ್ಧಿ ಕಾಣುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಕ್ಕೂ ಆದ್ಯತೆ ಸಿಕ್ಕಿದೆ’ ಎಂದು ಭಾಷಣದಲ್ಲಿ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>