<p><strong>ಕಣ್ಣೂರು (ಕೇರಳ):</strong> ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿ ಇರುವ ಶ್ರೀ ತಿರುವರ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ಭಕ್ತರಿಗೆ ‘ಪ್ರಸಾದ’ವಾಗಿ ಕೋಳಿ ಮಾಂಸದ ಖಾದ್ಯಗಳನ್ನು ವಿತರಿಸುವುದು ರೂಢಿಯಲ್ಲಿದೆ.</p>.<p>ವಿರೋಧ ಪಕ್ಷಗಳ ಕೆಲ ನಾಯಕರು ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಾಂಸಾಹಾರವನ್ನು ಸೇವಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದು ಸದ್ದು ಮಾಡಿತ್ತು. ಆದರೆ, ಕೇರಳದ ಈ ದೇವಸ್ಥಾನದಲ್ಲಿ, ದೇವಿಯ ಭಕ್ತರಿಗೆ ಪ್ರಸಾದವಾಗಿ ಚಿಕನ್ ಖಾದ್ಯಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕೆ ಯಾವ ದೂರು–ಆಕ್ಷೇಪಗಳೂ ವ್ಯಕ್ತವಾಗುತ್ತಿಲ್ಲ.</p>.<p>ಮಾಂಸಾಹಾರ ಕುರಿತು ಮೋದಿ ಅವರು ಹೇಳಿಕೆ ನೀಡಿದ ನಂತರ ಈ ದೇವಸ್ಥಾನದಲ್ಲಿನ ಸಂಪ್ರದಾಯ ಹೆಚ್ಚು ಗಮನ ಸೆಳೆಯುತ್ತಿದೆ.</p>.<p>ಈ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಮೋದಿ ಅವರನ್ನು ಒತ್ತಾಯಿಸಿದ್ದಾರೆ.</p>.<p>ಗಮನಾರ್ಹ ಸಂಗತಿ ಎಂದರೆ, ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ ಈ ದೇವಸ್ಥಾನದ ಭಕ್ತರಾಗಿದ್ದಾರೆ. ಆಗಾಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವ ಯಡಿಯೂರಪ್ಪ, ಭಕ್ತರ ಅನುಕೂಲಕ್ಕಾಗಿ ಭೋಜನಶಾಲೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.</p>.<p>‘ಅಮೃತದಾಯನಿ ಊಟುಪುರ ಎಂದು ಕರೆಯಲಾಗುವ ಈ ಕಟ್ಟಡವನ್ನು ಸ್ವತಃ ಯಡಿಯೂರಪ್ಪ ಅವರು 2009ರ ಡಿಸೆಂಬರ್ 26ರಂದು ಉದ್ಘಾಟಿಸಿದ್ದಾರೆ. 2016ರಲ್ಲಿ ಅವರು ದೇಗುಲಕ್ಕೆ ಭೇಟಿ ನೀಡಿದ್ದರು’ ಎಂದು ದೇವಸ್ಥಾನದ ಅಧಿಕಾರಿಗಳು ಹೇಳುತ್ತಾರೆ.</p>.<p>‘ಅನೇಕ ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಪ್ರಾಣಿ ಬಲಿ ಪದ್ಧತಿಯೂ ಇತ್ತು. ಈ ಪದ್ಧತಿ ಮೇಲೆ ನಿಷೇಧ ಹೇರಿದ ನಂತರ ಆ ಸಂಪ್ರದಾಯಕ್ಕೆ ಕೊನೆ ಹಾಡಲಾಗಿದೆ. ಆದರೆ, ಈಗಲೂ ದೇವಸ್ಥಾನದಲ್ಲಿ ಕೋಳಿ ಅಡುಗೆ ತಯಾರಿಸಿ, ನಿತ್ಯವೂ ದೇವಿಗೆ ಅರ್ಪಿಸಿ, ನಂತರ ಭಕ್ತರಿಗೆ ವಿತರಿಸಲಾಗುತ್ತದೆ’ ಎಂದೂ ಹೇಳುತ್ತಾರೆ.</p>.<p>ಕೇರಳದ ಉತ್ತರದಲ್ಲಿರುವ ಎಲ್ಲ ಭದ್ರಕಾಳಿ ದೇವಸ್ಥಾನಗಳ ತಾಯಿ ಎಂದು ಈ ದೇಗುಲವನ್ನು ಪರಿಗಣಿಸಲಾಗುತ್ತದೆ. ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರಲ್ಲದೇ, ರಾಜ್ಯ ಬಿಜೆಪಿಯ ಅನೇಕ ನಾಯಕರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.</p>.<p>ಈ ಭಾಗದಲ್ಲಿರುವ ಕನಿಷ್ಠ ಇತರ ಮೂರು ದೇವಸ್ಥಾನಗಳಲ್ಲಿ ಸಹ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೋಳಿ ಖಾದ್ಯಗಳನ್ನು ವಿತರಿಸುತ್ತಿರುವುದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣೂರು (ಕೇರಳ):</strong> ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿ ಇರುವ ಶ್ರೀ ತಿರುವರ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ಭಕ್ತರಿಗೆ ‘ಪ್ರಸಾದ’ವಾಗಿ ಕೋಳಿ ಮಾಂಸದ ಖಾದ್ಯಗಳನ್ನು ವಿತರಿಸುವುದು ರೂಢಿಯಲ್ಲಿದೆ.</p>.<p>ವಿರೋಧ ಪಕ್ಷಗಳ ಕೆಲ ನಾಯಕರು ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಾಂಸಾಹಾರವನ್ನು ಸೇವಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದು ಸದ್ದು ಮಾಡಿತ್ತು. ಆದರೆ, ಕೇರಳದ ಈ ದೇವಸ್ಥಾನದಲ್ಲಿ, ದೇವಿಯ ಭಕ್ತರಿಗೆ ಪ್ರಸಾದವಾಗಿ ಚಿಕನ್ ಖಾದ್ಯಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕೆ ಯಾವ ದೂರು–ಆಕ್ಷೇಪಗಳೂ ವ್ಯಕ್ತವಾಗುತ್ತಿಲ್ಲ.</p>.<p>ಮಾಂಸಾಹಾರ ಕುರಿತು ಮೋದಿ ಅವರು ಹೇಳಿಕೆ ನೀಡಿದ ನಂತರ ಈ ದೇವಸ್ಥಾನದಲ್ಲಿನ ಸಂಪ್ರದಾಯ ಹೆಚ್ಚು ಗಮನ ಸೆಳೆಯುತ್ತಿದೆ.</p>.<p>ಈ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಮೋದಿ ಅವರನ್ನು ಒತ್ತಾಯಿಸಿದ್ದಾರೆ.</p>.<p>ಗಮನಾರ್ಹ ಸಂಗತಿ ಎಂದರೆ, ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ ಈ ದೇವಸ್ಥಾನದ ಭಕ್ತರಾಗಿದ್ದಾರೆ. ಆಗಾಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವ ಯಡಿಯೂರಪ್ಪ, ಭಕ್ತರ ಅನುಕೂಲಕ್ಕಾಗಿ ಭೋಜನಶಾಲೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.</p>.<p>‘ಅಮೃತದಾಯನಿ ಊಟುಪುರ ಎಂದು ಕರೆಯಲಾಗುವ ಈ ಕಟ್ಟಡವನ್ನು ಸ್ವತಃ ಯಡಿಯೂರಪ್ಪ ಅವರು 2009ರ ಡಿಸೆಂಬರ್ 26ರಂದು ಉದ್ಘಾಟಿಸಿದ್ದಾರೆ. 2016ರಲ್ಲಿ ಅವರು ದೇಗುಲಕ್ಕೆ ಭೇಟಿ ನೀಡಿದ್ದರು’ ಎಂದು ದೇವಸ್ಥಾನದ ಅಧಿಕಾರಿಗಳು ಹೇಳುತ್ತಾರೆ.</p>.<p>‘ಅನೇಕ ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಪ್ರಾಣಿ ಬಲಿ ಪದ್ಧತಿಯೂ ಇತ್ತು. ಈ ಪದ್ಧತಿ ಮೇಲೆ ನಿಷೇಧ ಹೇರಿದ ನಂತರ ಆ ಸಂಪ್ರದಾಯಕ್ಕೆ ಕೊನೆ ಹಾಡಲಾಗಿದೆ. ಆದರೆ, ಈಗಲೂ ದೇವಸ್ಥಾನದಲ್ಲಿ ಕೋಳಿ ಅಡುಗೆ ತಯಾರಿಸಿ, ನಿತ್ಯವೂ ದೇವಿಗೆ ಅರ್ಪಿಸಿ, ನಂತರ ಭಕ್ತರಿಗೆ ವಿತರಿಸಲಾಗುತ್ತದೆ’ ಎಂದೂ ಹೇಳುತ್ತಾರೆ.</p>.<p>ಕೇರಳದ ಉತ್ತರದಲ್ಲಿರುವ ಎಲ್ಲ ಭದ್ರಕಾಳಿ ದೇವಸ್ಥಾನಗಳ ತಾಯಿ ಎಂದು ಈ ದೇಗುಲವನ್ನು ಪರಿಗಣಿಸಲಾಗುತ್ತದೆ. ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರಲ್ಲದೇ, ರಾಜ್ಯ ಬಿಜೆಪಿಯ ಅನೇಕ ನಾಯಕರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.</p>.<p>ಈ ಭಾಗದಲ್ಲಿರುವ ಕನಿಷ್ಠ ಇತರ ಮೂರು ದೇವಸ್ಥಾನಗಳಲ್ಲಿ ಸಹ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೋಳಿ ಖಾದ್ಯಗಳನ್ನು ವಿತರಿಸುತ್ತಿರುವುದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>