'ಪ್ರಧಾನಿಯವರಿಗೂ ನಾವು ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತೇವೆ. ಲಾಕ್ಡೌನ್ ವಿಸ್ತರಿಸಬೇಕಾದ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ನಾವೆಲ್ಲರೂ ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸುತ್ತೇವೆ. ಹಣಕಾಸಿನ ನೆರವಿಗಾಗಿ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ವಿನಂತಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾರ್ಚ್ 25, 2020ರಂದು ರೂಪಿಸಿರುವ ಸಂಕಷ್ಟ ನಿಧಿಗೆ ಒಂದೇ ಒಂದು ರೂಪಾಯಿ ಸೇರಿಸಿಲ್ಲ. ರಘುರಾಮ್ ರಾಜನ್ರಿಂದ ಜೀನ್ ಡ್ರೇಜ್, ಪ್ರಭಾತ್ ಪಟ್ನಾಯಕ್ರಿಂದ ಅಭಿಜಿತ್ ಬ್ಯಾನರ್ಜಿ ಅವರವರೆಗೆ ಹಲವು ತಜ್ಞರು ನೀಡಿರುವ ಸಲಹೆಗಳಿಗೆ ಸರ್ಕಾರ ಕಿವುಡಾಗಿದೆ' ಎಂದು ಚಿದಂಬರಂ ಹೇಳಿದ್ದಾರೆ.