<p><strong>ಮುಂಬೈ:</strong> ಎರಡು ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದಂತ ವೈದ್ಯೆಯೊಬ್ಬರನ್ನು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ | ಸಾಹಿಲ್ ಜಾಮೀನು ಅರ್ಜಿ ತಿರಸ್ಕೃತ.<p>ವಡಲಾ ಟ್ರಕ್ ಟರ್ಮಿನಸ್ ಪೊಲೀಸ್ ಠಾಣೆಯ ತಂಡ ಆರೋಪಿ ರೇಷ್ಮಾ ಸಂತೋಷ್ ಕುಮಾರ್ ಬ್ಯಾನರ್ಜಿ ಎಂಬವರನ್ನು ಬಂಧಿಸಿದೆ. ಎರಡು ವರ್ಷದ ಗಂಡು ಮಗು ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಕಾರ್ಯಾಚರಣೆ ವೇಳೆ ರಕ್ಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>ಗುತ್ತಿಗೆದಾರರೊಬ್ಬರು ಮೇ 2024 ರಲ್ಲಿ ತಮ್ಮ ಅಳಿಯ ಮತ್ತು ಪುಟ್ಟ ಮೊಮ್ಮಗನ ಅಪಹರಣದ ಬಗ್ಗೆ ದೂರು ನೀಡಿದ್ದರು.</p>.ಮುಂಬೈ: ಶೂನಲ್ಲಿ ಬಚ್ಚಿಟ್ಟು ₹6.3 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ!.<p>ದೂರುದಾರರ ಅಳಿಯ ಮಗುವನ್ನು ಅಸ್ಮಾ ಶೇಖ್, ಷರೀಫ್ ಶೇಖ್ ಮತ್ತು ಆಶಾ ಪವಾರ್ ಅವರಿಗೆ ₹ 1.6 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. </p><p>ಪೊಲೀಸರು ನಂತರ ಮಗುವಿನ ತಂದೆ ಮತ್ತು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಮಹಿಳೆಗೆ ಗಂಡು ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.ಫೆಂಟಾನಿಲ್ ಕಳ್ಳಸಾಗಣೆ: ಭಾರತದತ್ತ ಅಮೆರಿಕ ಬೊಟ್ಟು.<p>ಮಹಿಳೆ ಭುವನೇಶ್ವರದ ದಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಈ ವರ್ಷ ಏಪ್ರಿಲ್ 5 ರಂದು ಪೊಲೀಸರಿಗೆ ಸಿಕ್ಕಿದೆ. ಅಲ್ಲಿಗೆ ತೆರಳಿದಾಗ ಮಹಿಳೆ ಕೋಲ್ಕತ್ತದಲ್ಲಿ ಇರುವುದು ಗೊತ್ತಾಗಿದೆ.</p><p>ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ, ದೂರುದಾರರ ಮೊಮ್ಮಗ ಮತ್ತು ಮೂರು ವರ್ಷದ ಮತ್ತೊಂದು ಮಗುವನ್ನು ರಕ್ಷಿಸಿದ್ದಾರೆ.</p><p>ಆರೋಪಿ ಮಹಿಳೆ ಮತ್ತು ಮಕ್ಕಳನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯನ್ನು ಏಪ್ರಿಲ್ 13 ರಂದು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.</p> .ಚಿನ್ನ ಕಳ್ಳಸಾಗಣೆ: ಬೆಂಗಳೂರು ನೂತನ ಕಾರಸ್ಥಾನ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಎರಡು ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದಂತ ವೈದ್ಯೆಯೊಬ್ಬರನ್ನು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ | ಸಾಹಿಲ್ ಜಾಮೀನು ಅರ್ಜಿ ತಿರಸ್ಕೃತ.<p>ವಡಲಾ ಟ್ರಕ್ ಟರ್ಮಿನಸ್ ಪೊಲೀಸ್ ಠಾಣೆಯ ತಂಡ ಆರೋಪಿ ರೇಷ್ಮಾ ಸಂತೋಷ್ ಕುಮಾರ್ ಬ್ಯಾನರ್ಜಿ ಎಂಬವರನ್ನು ಬಂಧಿಸಿದೆ. ಎರಡು ವರ್ಷದ ಗಂಡು ಮಗು ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಕಾರ್ಯಾಚರಣೆ ವೇಳೆ ರಕ್ಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>ಗುತ್ತಿಗೆದಾರರೊಬ್ಬರು ಮೇ 2024 ರಲ್ಲಿ ತಮ್ಮ ಅಳಿಯ ಮತ್ತು ಪುಟ್ಟ ಮೊಮ್ಮಗನ ಅಪಹರಣದ ಬಗ್ಗೆ ದೂರು ನೀಡಿದ್ದರು.</p>.ಮುಂಬೈ: ಶೂನಲ್ಲಿ ಬಚ್ಚಿಟ್ಟು ₹6.3 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ!.<p>ದೂರುದಾರರ ಅಳಿಯ ಮಗುವನ್ನು ಅಸ್ಮಾ ಶೇಖ್, ಷರೀಫ್ ಶೇಖ್ ಮತ್ತು ಆಶಾ ಪವಾರ್ ಅವರಿಗೆ ₹ 1.6 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. </p><p>ಪೊಲೀಸರು ನಂತರ ಮಗುವಿನ ತಂದೆ ಮತ್ತು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಮಹಿಳೆಗೆ ಗಂಡು ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.ಫೆಂಟಾನಿಲ್ ಕಳ್ಳಸಾಗಣೆ: ಭಾರತದತ್ತ ಅಮೆರಿಕ ಬೊಟ್ಟು.<p>ಮಹಿಳೆ ಭುವನೇಶ್ವರದ ದಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಈ ವರ್ಷ ಏಪ್ರಿಲ್ 5 ರಂದು ಪೊಲೀಸರಿಗೆ ಸಿಕ್ಕಿದೆ. ಅಲ್ಲಿಗೆ ತೆರಳಿದಾಗ ಮಹಿಳೆ ಕೋಲ್ಕತ್ತದಲ್ಲಿ ಇರುವುದು ಗೊತ್ತಾಗಿದೆ.</p><p>ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ, ದೂರುದಾರರ ಮೊಮ್ಮಗ ಮತ್ತು ಮೂರು ವರ್ಷದ ಮತ್ತೊಂದು ಮಗುವನ್ನು ರಕ್ಷಿಸಿದ್ದಾರೆ.</p><p>ಆರೋಪಿ ಮಹಿಳೆ ಮತ್ತು ಮಕ್ಕಳನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯನ್ನು ಏಪ್ರಿಲ್ 13 ರಂದು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.</p> .ಚಿನ್ನ ಕಳ್ಳಸಾಗಣೆ: ಬೆಂಗಳೂರು ನೂತನ ಕಾರಸ್ಥಾನ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>