ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೆ.ವಿ.ವಿಶ್ವನಾಥನ್ ಅವರ ಪೀಠವು, ಮಾರ್ಚ್ 19ರಂದು ಹೊರಡಿಸಿದ್ದ ಆದೇಶದ ಬಳಿಕ ಪ್ರಕಟಿಸಲಾಗಿರುವ ಜಾಹೀರಾತುಗಳ ವಿವರ ಸಲ್ಲಿಸಿ, ಅದನ್ನು ಗಮನಿಸಬೇಕಿದೆ ಎಂದು ಅಜಿತ್ ಪವಾರ್ ಬಣದ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರಿಗೆ ಸೂಚಿಸಿತು. ‘ನಮ್ಮ ಆದೇಶವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುವ ಹಕ್ಕು ಯಾರಿಗೂ ಇಲ್ಲ’ ಎಂದು ಪೀಠ ಹೇಳಿತು.