<p><strong>ನವದೆಹಲಿ</strong>: ಚಳಿಗಾಲದಲ್ಲಿ ಉಂಟಾಗುವ ವಾಯುಮಾಲಿನ್ಯ ತಗ್ಗಿಸುವುದಕ್ಕಾಗಿ ದೆಹಲಿ ಸರ್ಕಾರವು, ಐಐಟಿ – ಕಾನ್ಪುರದ ಸಹಯೋಗದೊಂದಿಗೆ ಮಂಗಳವಾರ ನಗರದ ವಿವಿಧೆಡೆ ಕೈಗೊಂಡ ಮೋಡಬಿತ್ತನೆ ಕಾರ್ಯ ಫಲಪ್ರದವಾಗಿಲ್ಲ.</p>.<p>‘ಮೋಡಗಳಲ್ಲಿ ತೇವಾಂಶ ಕಡಿಮೆ ಇದ್ದ ಕಾರಣ, ಮೋಡಬಿತ್ತನೆ ಪ್ರಯೋಗದ ನಂತರವೂ ಮಳೆ ಬಂದಿಲ್ಲ. ಆದರೆ, ಈ ಪ್ರಯೋಗ ಉಪಯುಕ್ತ ಮಾಹಿತಿಯನ್ನು ಒದಗಿಸಿದೆ’ ಎಂದು ಕಾನ್ಪುರ ಐಐಟಿ ನಿರ್ದೇಶಕ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.</p>.<p class="title">ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಾತಾವರಣದಲ್ಲಿ ಕೇವಲ ಶೇ 15 ರಷ್ಟು ತೇವಾಂಶವಿತ್ತು. ಇಷ್ಟು ಕಡಿಮೆ ತೇವಾಂಶದೊಂದಿಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಯಶಸ್ಸು ದೊರೆತಿಲ್ಲ’ ಎಂದು ಅವರು ವಿವರಿಸಿದ್ದಾರೆ.</p>.<p class="title">‘300 ಚದರ ಕಿ.ಮೀ ಪ್ರದೇಶದಲ್ಲಿ ಮೋಡ ಬಿತ್ತನೆ ಪ್ರಯೋಗ ನಡೆಸಲಾಯಿತು. ಇದರ ವೆಚ್ಚ ಅಂದಾಜು ₹60 ಲಕ್ಷ. ಅಂದರೆ ಪ್ರತಿ ಚದರ ಕಿ.ಮೀಗೆ ₹20 ಸಾವಿರ. ನಾವು ಒಂದು ಸಾವಿರ ಚದರ ಕಿ.ಮೀ ಪ್ರದೇಶದಲ್ಲಿ ಈ ಪ್ರಯೋಗವನ್ನು ನಡೆಸಿದರೆ, ಸುಮಾರು ₹2 ಕೋಟಿ ವೆಚ್ವಾಗಬಹುದು’ ಎಂದು ತಿಳಿಸಿದ್ದಾರೆ.</p>.<p class="title">‘ನಗರದಲ್ಲಿ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳಿಗೆ ಮಾಡುವ ಖರ್ಚಿಗೆ ಹೋಲಿಸಿದರೆ, ಮೋಡ ಬಿತ್ತನೆಗೆ ಮಾಡುತ್ತಿರುವ ವೆಚ್ಚ ದೊಡ್ಡದಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>ಸರ್ಕಾರ, ಐಐಟಿ ವಿಜ್ಞಾನಿಗಳ ಸಹಯೋಗದಲ್ಲಿ ದೆಹಲಿಯ ಬುರಾರಿ, ಉತ್ತರ ಕರೋಲ್ ಬಾಘ್ ಮತ್ತು ಮಯೂರು ವಿಹಾರ್ ಪ್ರದೇಶಗಳಲ್ಲಿ ಎರಡು ಬಾರಿ ಮೋಡಬಿತ್ತನೆ ಪ್ರಯೋಗ ನಡೆಸಿತ್ತು. ಆದರೆ, ಮಳೆಯಾಗಲಿಲ್ಲ. ಈ ಪ್ರಯೋಗಗಳ ನಂತರ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ತುಂತುರು ಮಳೆಯಾದ ವರದಿಯಾಗಿದೆ.</p>.<p>ಮೋಡಗಳಲ್ಲಿ ಸಾಕಷ್ಟು ತೇವಾಂಶವಿಲ್ಲದ ಕಾರಣ ದೆಹಲಿಯಲ್ಲಿ ಬುಧವಾರ ನಿಗದಿಯಾಗಿದ್ದ ಮೋಡ ಬಿತ್ತನೆ ಪ್ರಯೋಗವನ್ನು ಸ್ಥಗಿತಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚಳಿಗಾಲದಲ್ಲಿ ಉಂಟಾಗುವ ವಾಯುಮಾಲಿನ್ಯ ತಗ್ಗಿಸುವುದಕ್ಕಾಗಿ ದೆಹಲಿ ಸರ್ಕಾರವು, ಐಐಟಿ – ಕಾನ್ಪುರದ ಸಹಯೋಗದೊಂದಿಗೆ ಮಂಗಳವಾರ ನಗರದ ವಿವಿಧೆಡೆ ಕೈಗೊಂಡ ಮೋಡಬಿತ್ತನೆ ಕಾರ್ಯ ಫಲಪ್ರದವಾಗಿಲ್ಲ.</p>.<p>‘ಮೋಡಗಳಲ್ಲಿ ತೇವಾಂಶ ಕಡಿಮೆ ಇದ್ದ ಕಾರಣ, ಮೋಡಬಿತ್ತನೆ ಪ್ರಯೋಗದ ನಂತರವೂ ಮಳೆ ಬಂದಿಲ್ಲ. ಆದರೆ, ಈ ಪ್ರಯೋಗ ಉಪಯುಕ್ತ ಮಾಹಿತಿಯನ್ನು ಒದಗಿಸಿದೆ’ ಎಂದು ಕಾನ್ಪುರ ಐಐಟಿ ನಿರ್ದೇಶಕ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.</p>.<p class="title">ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಾತಾವರಣದಲ್ಲಿ ಕೇವಲ ಶೇ 15 ರಷ್ಟು ತೇವಾಂಶವಿತ್ತು. ಇಷ್ಟು ಕಡಿಮೆ ತೇವಾಂಶದೊಂದಿಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಯಶಸ್ಸು ದೊರೆತಿಲ್ಲ’ ಎಂದು ಅವರು ವಿವರಿಸಿದ್ದಾರೆ.</p>.<p class="title">‘300 ಚದರ ಕಿ.ಮೀ ಪ್ರದೇಶದಲ್ಲಿ ಮೋಡ ಬಿತ್ತನೆ ಪ್ರಯೋಗ ನಡೆಸಲಾಯಿತು. ಇದರ ವೆಚ್ಚ ಅಂದಾಜು ₹60 ಲಕ್ಷ. ಅಂದರೆ ಪ್ರತಿ ಚದರ ಕಿ.ಮೀಗೆ ₹20 ಸಾವಿರ. ನಾವು ಒಂದು ಸಾವಿರ ಚದರ ಕಿ.ಮೀ ಪ್ರದೇಶದಲ್ಲಿ ಈ ಪ್ರಯೋಗವನ್ನು ನಡೆಸಿದರೆ, ಸುಮಾರು ₹2 ಕೋಟಿ ವೆಚ್ವಾಗಬಹುದು’ ಎಂದು ತಿಳಿಸಿದ್ದಾರೆ.</p>.<p class="title">‘ನಗರದಲ್ಲಿ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳಿಗೆ ಮಾಡುವ ಖರ್ಚಿಗೆ ಹೋಲಿಸಿದರೆ, ಮೋಡ ಬಿತ್ತನೆಗೆ ಮಾಡುತ್ತಿರುವ ವೆಚ್ಚ ದೊಡ್ಡದಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>ಸರ್ಕಾರ, ಐಐಟಿ ವಿಜ್ಞಾನಿಗಳ ಸಹಯೋಗದಲ್ಲಿ ದೆಹಲಿಯ ಬುರಾರಿ, ಉತ್ತರ ಕರೋಲ್ ಬಾಘ್ ಮತ್ತು ಮಯೂರು ವಿಹಾರ್ ಪ್ರದೇಶಗಳಲ್ಲಿ ಎರಡು ಬಾರಿ ಮೋಡಬಿತ್ತನೆ ಪ್ರಯೋಗ ನಡೆಸಿತ್ತು. ಆದರೆ, ಮಳೆಯಾಗಲಿಲ್ಲ. ಈ ಪ್ರಯೋಗಗಳ ನಂತರ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ತುಂತುರು ಮಳೆಯಾದ ವರದಿಯಾಗಿದೆ.</p>.<p>ಮೋಡಗಳಲ್ಲಿ ಸಾಕಷ್ಟು ತೇವಾಂಶವಿಲ್ಲದ ಕಾರಣ ದೆಹಲಿಯಲ್ಲಿ ಬುಧವಾರ ನಿಗದಿಯಾಗಿದ್ದ ಮೋಡ ಬಿತ್ತನೆ ಪ್ರಯೋಗವನ್ನು ಸ್ಥಗಿತಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>